ಬೆಂಗಳೂರು: ‘ರಾಜ್ಯದಲ್ಲಿವಹ್ನಿಕುಲ ಕ್ಷತ್ರಿಯ ಹಾಗೂ ಅಗ್ನಿಕುಲ ಕ್ಷತ್ರಿಯ ಸಮುದಾಯಗಳಿಗೆ ಪ್ರತ್ಯೇಕ ನಿಗಮ ಸ್ಥಾಪಿಸಬೇಕು’ ಎಂದುಧರ್ಮರಾಜಕಾಪುರೆಡ್ಡಿಸಂಘದಸಂಸ್ಥಾಪಕ ವರ್ತೂರು ಜೆ.ಕೆ.ಗಿರೀಶ್ ಆಗ್ರಹಿಸಿದರು.
ದಕ್ಷಿಣ ಭಾರತ ಅಗ್ನಿಕುಲ ವಹ್ನಿಕುಲ ಪ್ರಾಚೀನ ಪಾರಸತ್ವ ಪರಿಶೋಧನಾ ಸಂಸ್ಥೆಯುಭಾನುವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಕರಗದ ಕುಲಸ್ಥರ ಸಮಾವೇಶದಲ್ಲಿ ಅವರು ಮಾತನಾಡಿದರು.
‘ನಮ್ಮ ಜನಾಂಗಕ್ಕೆ ಸಂಬಂಧಪಡದ ಕೆಲ ಜಾತಿಗಳಿದ್ದು, ಅವುಗಳನ್ನುಹಿಂದುಳಿದ ವರ್ಗಗಳ ಪಟ್ಟಿಯಿಂದ ತೆಗೆಯಬೇಕು. ಬೆಂಗಳೂರು ಕರಗ ಮಹೋತ್ಸವದ ಆರಾಧಕರು ಹಾಗೂ ಧರ್ಮರಾಯನ ಕುಲದವರಾದ ವಹ್ನಿಕುಲ ಕ್ಷತ್ರಿಯ ಮತ್ತು ಇದರ ಉಪಜಾತಿಗಳಾದ ವನ್ನೇ ರೆಡ್ಡಿ, ವನ್ನೇ ಕಾಪು, ಪಳ್ಳಿ ರೆಡ್ಡಿ, ಪಳ್ಳಿ ಕಾಪು, ಧರ್ಮರಾಜು ಕಾಪು, ವನ್ನಿಯರ್ ಗೌಂಡರ್, ವಹ್ನಿಕುಲ ಗೌಂಡರ್ ಈ ಜಾತಿಗಳನ್ನು ಪಟ್ಟಿಗೆ ಸೇರ್ಪಡೆ ಮಾಡಬೇಕು’ ಎಂದು ಮನವಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.