ಬೆಂಗಳೂರು: ‘ನಾವು ಪಾಕಿಸ್ತಾನದವರು’ ಎಂದು ಕೂಗಾಡಿದ್ದ ಗುಂಪೊಂದು ಗುತ್ತಿಗೆದಾರ ವಿ.ಟಿ. ತಿಲಕ್ ಎಂಬುವರ ಮೇಲೆ ಹಲ್ಲೆ ಮಾಡಿದ್ದು, ಈ ಸಂಬಂಧ ಕೋರಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಅ. 31ರಂದು ರಾತ್ರಿ ಈ ಘಟನೆ ನಡೆದಿದೆ. ಗಾಯಾಳು ತಿಲಕ್ ನೀಡಿರುವ ದೂರು ಆಧರಿಸಿ ಆರೋಪಿಗಳಾದ ಅಕ್ಷತ್ ಜೈನ್, ಜೆ. ಕೊಠಾರಿ ಹಾಗೂ ಇತರರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.
‘ದೂರುದಾರ ತಿಲಕ್ ಹಾಗೂ ಸ್ನೇಹಿತರು, ಠಾಣೆ ವ್ಯಾಪ್ತಿಯ ಪಬ್ವೊಂದಕ್ಕೆ ಹೋಗಿದ್ದರು. ಐಪಿಎಲ್ ಕ್ರಿಕೆಟ್ ಪಂದ್ಯಾವಳಿ ವೀಕ್ಷಿಸುತ್ತಿದ್ದರು. ಅವರನ್ನು ಗುರಾಯಿಸಿದ್ದ ಆರೋಪಿಗಳು, ಹತ್ತಿರ ಬಂದು ನಿಂದಿಸಿದ್ದರು. ‘ನೀವು ಬೆಂಗಳೂರಿನವರಾ’ ಎಂದು ದೂರುದಾರ ಕೇಳಿದ್ದರು. ‘ನಾವು ಪಾಕಿಸ್ತಾನದವರು’ ಎಂದು ಹೇಳಿ ಕೂಗಾಡಿದ್ದ ಆರೋಪಿಗಳು, ಅಲ್ಲಿಂದ ಹೊರಟು ಹೋಗಿದ್ದರು.’
‘ಕೆಲ ಸಮಯದ ನಂತರ ಪಬ್ನ ಕೊಠಡಿಯೊಂದರಲ್ಲಿ ತಿಲಕ್ ನಿಂತಿದ್ದರು. ಅಲ್ಲಿಗೆ ಹೋದ ಆರೋಪಿಗಳು, ಅವರ ಜೊತೆ ಜಗಳ ತೆಗೆದು ಹಲ್ಲೆ ಮಾಡಿದ್ದಾರೆ. ಟೀ ಶರ್ಟ್ ಹಿಡಿದು ಎಳೆದಾಡಿ ಜೀವ ಬೆದರಿಕೆ ಹಾಕಿದ್ದಾರೆ’ ಎಂದೂ ಪೊಲೀಸರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.