ADVERTISEMENT

ಬಿಬಿಎಂಪಿ: ಪಾಲಿಕೆ ಸದಸ್ಯ ಏಳುಮಲೈ ನಿಧನ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2018, 8:01 IST
Last Updated 6 ಡಿಸೆಂಬರ್ 2018, 8:01 IST
ನಿಧನರಾದ ಪಾಲಿಕೆ ಸದಸ್ಯ ಏಳುಮಲೈ ಅವರಿಗೆ ಮೇಯರ್ ಗಂಗಾಂಬಿಕೆ ಹಾಗೂ ಪಾಲಿಕೆ ಆಡಳಿತ ಪಕ್ಷದ ನಾಯಕ ಎಂ.ಶಿವರಾಜು ಅಂತಿಮ ನಮನ ಸಲ್ಲಿಸಿದರು.
ನಿಧನರಾದ ಪಾಲಿಕೆ ಸದಸ್ಯ ಏಳುಮಲೈ ಅವರಿಗೆ ಮೇಯರ್ ಗಂಗಾಂಬಿಕೆ ಹಾಗೂ ಪಾಲಿಕೆ ಆಡಳಿತ ಪಕ್ಷದ ನಾಯಕ ಎಂ.ಶಿವರಾಜು ಅಂತಿಮ ನಮನ ಸಲ್ಲಿಸಿದರು.   

ಬೆಂಗಳೂರು:ಅನಾರೋಗ್ಯದಿಂದ ಬಳಲುತ್ತಿದ್ದ ಪಾಲಿಕೆ ಸದಸ್ಯ ವಿ.ಏಳುಮಲೈ (40)ಅವರು ಗುರುವಾರ ಮುಂಜಾನೆ 1.30ಕ್ಕೆ ನಿಧನರಾದರು.

ಅವರು ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು.

ಸಗಾಯಪುರ ವಾರ್ಡ್​ನಲ್ಲಿ ಪಕ್ಷೇತರರಾಗಿ ಗೆದ್ದಿದ್ದ ಅವರಿಗೆ ತಿಂಗಳ ಹಿಂದೆ ಮೂಗಿನಲ್ಲಿ ಗುಳ್ಳೆ ಕಾಣಿಸಿಕೊಂಡಿತ್ತು.ಆಸ್ಪತ್ರೆಗೆ ದಾಖಲಾಗಿದ್ದ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಈ ವೇಳೆ ಅರಿವಳಿಕೆ ಮದ್ದು ನೀಡುವಾಗ ವ್ಯತ್ಯಯ ಉಂಟಾಗಿದ್ದರಿಂದ ಅವರ ಆರೋಗ್ಯ ಹದಗೆಟ್ಟಿತ್ತು. 28 ದಿನಗಳಿಂದ ಕೋಮಾ ಸ್ಥಿತಿಯಲ್ಲಿದ್ದರು.

ADVERTISEMENT

ಬಿಬಿಎಂಪಿ ಸಮಾಜ ಕಲ್ಯಾಣ ಸ್ಥಾಯಿ ಸಮಿತಿ ಅಧ್ಯಕ್ಷರಾಗಿಯೂ ಅವರು ಕಾರ್ಯನಿರ್ವಹಿಸಿದ್ದರು.ಏಳುಮಲೈ ನಿಧನದ ಕಾರಣ ಪಾಲಿಕೆ ಕಚೇರಿಗೆ ಗುರುವಾರ ಮತ್ತು ಶುಕ್ರವಾರ ರಜೆನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.