ADVERTISEMENT

ನಗರದಲ್ಲಿ ಇಂದು: ಬೆಂಗಳೂರಲ್ಲಿ ಈ ದಿನದ ಕಾರ್ಯಕ್ರಮಗಳು

2026ರ ಫೆಬ್ರುವರಿ 7, ಶನಿವಾರ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 22:31 IST
Last Updated 6 ಫೆಬ್ರುವರಿ 2026, 22:31 IST
   

ರಸ್ಕಿನ್ ಬಾಂಡ್ ಅವರ ಆತ್ಮಚರಿತ್ರೆ ‘ಬರಹಗಾರನೊಬ್ಬನ ಒಂಟಿ ನಡಿಗೆ’ ಪುಸ್ತಕ ಬಿಡುಗಡೆ: ಎಸ್‌. ದಿವಾಕರ್, ಅಧ್ಯಕ್ಷತೆ: ಕೆ.ಈ.ರಾಧಾಕೃಷ್ಣ, ಪುಸ್ತಕದ ಬಗ್ಗೆ ಮಾತು: ಆರ್. ಲಕ್ಷ್ಮೀನಾರಾಯಣ, ಅನುವಾದ: ಎಂ.ಎಸ್. ರಘುನಾಥ್, ಆಯೋಜನೆ: ಕಾಮಧೇನು ಪುಸ್ತಕ ಭವನ, ಸ್ಥಳ: ಬಿ.ಎಂ.ಶ್ರೀ. ಪ್ರತಿಷ್ಠಾನ, 3ನೇ ಮುಖ್ಯರಸ್ತೆ, ಎನ್.ಆರ್.ಕಾಲೊನಿ, ಬೆಳಿಗ್ಗೆ 10

ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ 100ನೇ ಜಯಂತಿ ಅಂಗವಾಗಿ ಕವನ ವಾಚನ: ಆಯೋಜನೆ: ಪ್ರೊ.ಜಿ.ಎಸ್. ಶಿವರುದ್ರಪ್ಪ ಮತ್ತು ಪ್ರೊ.ಯು.ಆರ್. ಅನಂತಮೂರ್ತಿ ಸಾಂಸ್ಕೃತಿಕ ಜಗತಿ ಜಂಟಿ ಕ್ರಿಯಾ ಸಮಿತಿ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಳಿಗ್ಗೆ 10

ಎಂ ‘ಜವಳಿ’ ಹಬ್ಬ! ಎಫ್&ಎ ಶೋ ಮತ್ತು ಸಿದ್ಧ ಉಡುಪುಗಳ ಮೇಳ: ಕೆಟಿಪಿಒ ಟ್ರೇಡ್‌ ಸೆಂಟರ್‌, ವೈಟ್‌ಫೀಲ್ಡ್‌, ಬೆಳಿಗ್ಗೆ 10 

ADVERTISEMENT

‘ಎಂಎಸ್ಐಎಲ್ ಚಿಟ್ಸ್’ ಹೊಸ ತಂತ್ರಾಂಶ ಹಾಗೂ ಮೊಬೈಲ್ ಆ್ಯಪ್ ಬಿಡುಗಡೆ ಸಮಾರಂಭ: ಉದ್ಘಾಟನೆ: ಸಿದ್ದರಾಮಯ್ಯ, ಉಪಸ್ಥಿತಿ: ಡಿ.ಕೆ. ಶಿವಕುಮಾರ್, ಬಸವರಾಜ ಹೊರಟ್ಟಿ, ಯು.ಟಿ. ಖಾದರ್, ಅಧ್ಯಕ್ಷತೆ: ಎಂ.ಬಿ. ಪಾಟೀಲ, ಅತಿಥಿಗಳು: ಆರ್. ಅಶೋಕ, ಛಲವಾದಿ ನಾರಾಯಣಸ್ವಾಮಿ, ಸಿ. ಪುಟ್ಟರಂಗಶೆಟ್ಟಿ, ರಿಜ್ವಾನ್ ಅರ್ಷದ್, ಆಯೋಜನೆ: ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್, ಸ್ಥಳ: ಬ್ಯಾಂಕ್ವೆಟ್ ಹಾಲ್, ವಿಧಾನಸೌಧ, ಬೆಳಿಗ್ಗೆ 10.30

ಡಾ.ಜಿಎಸ್ಸೆಸ್ ಪ್ರಶಸ್ತಿ ಪ್ರದಾನ: ಕೆ.ವಿ. ನಾರಾಯಣ, ಎಸ್.ಜಿ. ಸಿದ್ಧರಾಮಯ್ಯ ಅವರ ‘ನಮ್ಮ ಮೇಷ್ಟ್ರು ಜಿಎಸ್ಸೆಸ್’ ಪುಸ್ತಕ ಬಿಡುಗಡೆ, ಪ್ರಶಸ್ತಿ ಪುರಸ್ಕೃತರು: ಎಚ್.ಎಸ್. ಶಿವಪ್ರಕಾಶ್, ಕೃಷ್ಣಮೂರ್ತಿ ಹನೂರು, ವಿನಯಾ ಒಕ್ಕುಂದ, ಅಭಿನಂದನಾ ನುಡಿ: ಎಂ.ಎಸ್. ಆಶಾದೇವಿ, ಅಧ್ಯಕ್ಷತೆ: ಬಸವರಾಜ ಕಲ್ಗುಡಿ, ಅತಿಥಿಗಳು: ಕೆ.ಎಂ. ಗಾಯತ್ರಿ, ವೂಡೇ ಪಿ. ಕೃಷ್ಣ, ಮೋಹನ್ ಕುಮಾರ್ ಕೊಂಡಜ್ಜಿ, ಆಯೋಜನೆ: ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪ ಪ್ರತಿಷ್ಠಾನ, ರಾಷ್ಟ್ರಕವಿ ಡಾ.ಜಿಎಸ್ಸೆಸ್ ವಿಶ್ವಸ್ತ ಮಂಡಳಿ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಸ್ಥಳ: ಗಾಂಧಿಭವನ, ಕುಮಾರ ಪಾರ್ಕ್, ಬೆಳಿಗ್ಗೆ 10.30

ಕನ್ನಡ ಗೀತೆಗಳ ತರಬೇತಿ ಶಿಬಿರ ಮತ್ತು ಸಮೂಹ ಗಾಯನ ಹಾಗೂ ಎಸ್.ಜಿ. ಸುಶೀಲಮ್ಮ ಅವರಿಗೆ ಅಭಿನಂದನೆ: ಮಧುರ ಅಶೋಕ್ ಕುಮಾರ್, ಅತಿಥಿಗಳು: ಲಕ್ಷ್ಮೀನಾರಾಯಣ, ಮಂಜುನಾಥ, ಆಯೋಜನೆ: ರಂಗ ಸಂಸ್ಥಾನ, ಸ್ಥಳ: ಕುವೆಂಪು ರಂಗಮಂದಿರ, ಸುಮಂಗಲಿ ಸೇವಾಶ್ರಮ, ಚೋಳನಾಯಕನಹಳ್ಳಿ, ಬೆಳಿಗ್ಗೆ 10.30

ಭಾರತೀಯ ಕಲಾ ಕಾಂಗ್ರೆಸ್‌ನ 33ನೇ ಅಧಿವೇಶನ: ಉದ್ಘಾಟನೆ: ಜಿ.ಬಿ. ದೆಗ್ಲೂರ್ಕರ್, ಅಧ್ಯಕ್ಷತೆ: ವಿ. ನಾಗರಾಜ್, ಆಯೋಜನೆ: ದಿ ಮಿಥಿಕ್ ಸೊಸೈಟಿ, ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟೋರಿಕಲ್ ರಿಸರ್ಚ್, ಸ್ಥಳ: ಜನಸೇವಾ ವಿದ್ಯಾಕೇಂದ್ರ, ಚನ್ನೇನಹಳ್ಳಿ, ಮಾಗಡಿ ರಸ್ತೆ, ಬೆಳಿಗ್ಗೆ 10.30

10ನೇ ವಾರ್ಷಿಕ ಘಟಿಕೋತ್ಸವ: ಪದವಿ ಪ್ರದಾನ: ಎಂ.ಸಿ. ಸುಧಾಕರ್, ಘಟಿಕೋತ್ಸವ ಭಾಷಣ: ಸಂಜೀವ್ ಕೇಸ್ಕರ್, ಅತಿಥಿಗಳು: ಕೆ.ಸಿ. ರಾಮಮೂರ್ತಿ, ಸಬಿತಾ ರಾಮಮೂರ್ತಿ, ಆಯೋಜನೆ ಹಾಗೂ ಸ್ಥಳ: ಸಿಎಂಆರ್ ವಿಶ್ವವಿದ್ಯಾಲಯ, ಲೇಕ್‌ಸೈಡ್ ಕ್ಯಾಂಪಸ್, ಹೆಣ್ಣೂರು–ಬಾಗಲೂರು ಮುಖ್ಯರಸ್ತೆ, ಚಾಗಲಟ್ಟಿ, ಬೆಳಿಗ್ಗೆ 10.45

ರಾಷ್ಟ್ರಕವಿ ಪ್ರೊ.ಜಿ.ಎಸ್. ಶಿವರುದ್ರಪ್ಪ ರಾಷ್ಟ್ರೀಯ ಪುರಸ್ಕಾರ ಪ್ರದಾನ: ಸತೀಶ್ ಕುಮಾರ್ ಎಸ್. ಹೊಸಮನಿ, ಉದ್ಘಾಟನೆ: ಬಿ.ಟಿ.ಲಲಿತಾ ನಾಯಕ್, ಅಧ್ಯಕ್ಷತೆ: ಬೈರಮಂಗಲ ರಾಮೇಗೌಡ, ಪ್ರಶಸ್ತಿ ಪುರಸ್ಕೃತರು: ಸುಬ್ಬು ಹೊಲೆಯಾರ್, ಅತಿಥಿಗಳು: ವೀಣಾ ಶರ್ಮಾ ಬೂಸನೂರುಮಠ, ಎಂ. ಬೈರೇಗೌಡ, ಚಂದ್ರಶೇಖರ್ ಎನ್., ಆಯೋಜನೆ: ಪ್ರೊ.ಜಿ.ಎಸ್. ಶಿವರುದ್ರಪ್ಪ ಮತ್ತು ಪ್ರೊ.ಯು.ಆರ್. ಅನಂತಮೂರ್ತಿ ಸಾಂಸ್ಕೃತಿಕ ಜಗತಿ ಜಂಟಿ ಕ್ರಿಯಾ ಸಮಿತಿ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಳಿಗ್ಗೆ 11

ಶೋಷಿತ ಸಮುದಾಯಗಳ ವಿಮೋಚನಾ ದಿನ: ರಮಾಬಾಯಿ ಅಂಬೇಡ್ಕರ್ ಅವರ 128ನೇ ವರ್ಷದ ಜನ್ಮದಿನಾಚರಣೆ ಪ್ರಯುಕ್ತ, ಉದ್ಘಾಟನೆ: ಎಚ್.ಸಿ. ಮಹದೇವಪ್ಪ, ಅಧ್ಯಕ್ಷತೆ: ಇಂದಿರಾ ಕೃಷ್ಣಪ್ಪ, ಮಾವಳ್ಳಿ ಶಂಕರ್, ಅತಿಥಿಗಳು: ಮಲ್ಲಿಕಾ ಘಂಟಿ, ಪಲ್ಲವಿ ಜಿ., ಜಯದೇವಿ ಗಾಯಕ್ವಾಡ್, ಅನುಸೂಯಮ್ಮ, ಜಾನಕಿ ನಾಗವಾರ, ಭಾರತಿ ರಾಜಣ್ಣ, ನಿರ್ಮಲಾ, ಆಯೋಜನೆ: ಕರ್ನಾಟಕ ದಲಿತ ಮಹಿಳಾ ಒಕ್ಕೂಟ, ಕರ್ನಾಟಕ ದಲಿತ ಸಂಘರ್ಷ ಸಮಿತಿ, ಸ್ಥಳ: ಎನ್‌ಜಿಒ ಹಾಲ್, ಕಬ್ಬನ್ ಉದ್ಯಾನ, ಅಂಬೇಡ್ಕರ್ ವೀಧಿ, ಬೆಳಿಗ್ಗೆ 11

ಪುಸ್ತಕ ಸುಗ್ಗಿ: ಜಿ.ಕೆ. ಪ್ರಮೋದ್ ಅವರ ಉದ್ಯಮದ ಬಗ್ಗೆ ಸಂವಾದ, ಆಯೋಜನೆ ಹಾಗೂ ಸ್ಥಳ: ಸಪ್ನ ಬುಕ್‌ ಹೌಸ್, ಗಾಂಧಿನಗರ, ಬೆಳಿಗ್ಗೆ 11

ಕನ್ನಡದ ವ್ಯಂಗ್ಯಚಿತ್ರಕಾರರಿಂದ ವಾರ್ಷಿಕ ವ್ಯಂಗ್ಯಚಿತ್ರ ಪ್ರದರ್ಶನ: ಉದ್ಘಾಟನೆ: ಬಿ.ವಿ. ಪಾಂಡುರಂಗ ರಾವ್, ಅತಿಥಿ: ಜಿ.ಎನ್. ಮೋಹನ್, ಅಧ್ಯಕ್ಷತೆ: ನಂಜುಂಡಸ್ವಾಮಿ, ಗೌರವ ಸಮರ್ಪಣೆ: ವಿ.ಆರ್.ಸಿ. ಶೇಖರ್, ಬಿ.ಜಿ. ಗುಜ್ಜಾರಪ್ಪ, ಆಯೋಜನೆ: ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘ, ಸ್ಥಳ: ಇಂಡಿಯನ್‌ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಬೆಳಿಗ್ಗೆ 11

ಪ್ರತಿಭಟನಾ ಸಮಾವೇಶ: ‘ಕೆಪಿಎಸ್- ಮ್ಯಾಗ್ನೆಟ್’ ಯೋಜನೆ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುವುದನ್ನು ವಿರೋಧಿಸಿ, ಅತಿಥಿಗಳು: ಎಸ್.ಜಿ. ಸಿದ್ಧರಾಮಯ್ಯ, ನಿರಂಜನಾರಾಧ್ಯ, ಕವಿರಾಜ್, ಕಿಶೋರ್, ಬಿ. ಸುರೇಶ್, ಸಬಿಹಾ ಭೂಮಿಗೌಡ, ಲತಾ ಮೈಸೂರು, ಕಿರಣ್ ಗಾಜನೂರು, ಗುರುಪ್ರಸಾದ್ ಕೆರೆಗೋಡು, ವಿ.ಎನ್. ರಾಜಶೇಖರ್, ಅಲೀನಾ ಎಸ್., ಅಶ್ವಿನಿ ಕೆ.ಎಸ್., ಅಜಯ್ ಕಾಮತ್, ಆಯೋಜನೆ: ಎಐಡಿಎಸ್‌ಒ ಕರ್ನಾಟಕ ರಾಜ್ಯ ಸಮಿತಿ, ಸ್ಥಳ: ಮೈಲಾರ ಮಹಾದೇವಪ್ಪ ಸಭಾಂಗಣ, ಗಾಂಧಿಭವನ, ಬೆಳಿಗ್ಗೆ 11

ಸಂಗಮೇಶ ಬಾದವಾಡಗಿಯವರ ಅಭಿನಂದನಾ ಸಮಾರಂಭ ಹಾಗೂ ‘ಸಂಗಮ’ ಅಭಿನಂದನಾ ಗ್ರಂಥ ಜನಾರ್ಪಣೆ: ಸಾನ್ನಿಧ್ಯ; ಗವಿಸಿದ್ದೇಶ್ವರ ಸ್ವಾಮೀಜಿ, ಶಿವಶಾಂತವೀರ ಸ್ವಾಮೀಜಿ, ಉದ್ಘಾಟನೆ: ಜಗದೀಶ ಶೆಟ್ಟರ್, ಅಧ್ಯಕ್ಷತೆ: ಶಂಕರ್ ಬಿದರಿ, ಗ್ರಂಥ ಬಿಡುಗಡೆ: ಈಶ್ವರ್ ಖಂಡ್ರೆ, ಅತಿಥಿಗಳು: ರಾಮಲಿಂಗಾರೆಡ್ಡಿ, ಶರಣಬಸಪ್ಪ ದರ್ಶನಾಪುರ, ಶಿವರಾಜ ತಂಗಡಗಿ, ರಾಘವೇಂದ್ರ ಹಿಟ್ನಾಳ್, ಆಯೋಜನೆ: ಸಂಗಮೇಶ ಬಾದವಾಡಗಿ ಅಭಿನಂದನಾ ಸಮಿತಿ, ಸ್ಥಳ: ಜಗದ್ಗುರು ರೇಣುಕಾಚಾರ್ಯ ವಿದ್ಯಾಸಂಸ್ಥೆ ಸಭಾಂಗಣ, ಆನಂದರಾವ್‌ ವೃತ್ತ, ಮಧ್ಯಾಹ್ನ 2.30

ಪುಟ್ಟರಾಜ ಗವಾಯಿ ಅವರ ಪುಣ್ಯ ಸ್ಮರಣೆ ಹಾಗೂ 16ನೇ ಸಂಗೀತೋತ್ಸವ: ಅಧ್ಯಕ್ಷತೆ: ಸಂತೋಷ್ ಹೆಗ್ಡೆ, ಉದ್ಘಾಟನೆ: ಸತೀಶ್ ಹಂಪಿಹೊಳಿ, ಅತಿಥಿ: ಪೂರ್ಣಾ ಆಚಾರ್ಯ, ‍ಪ್ರಶಸ್ತಿ ಪುರಸ್ಕೃತರು: ವಾಗೀಶ್ ಭಟ್, ಪ್ರಭುರಾವ್ ಸೊನ್ನ, ಆಯೋಜನೆ: ಗುರು ಗಾನಲಹರಿ ಸಂಗೀತ ಅಕಾಡೆಮಿ, ಸ್ಥಳ: ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಮಧ್ಯಾಹ್ನ 3

ಬೃಹತ್ ಶೋಭಾಯಾತ್ರೆ: ಸಾನ್ನಿಧ್ಯ: ಸೌಮ್ಯನಾಥ ಸ್ವಾಮೀಜಿ, ಆಯೋಜನೆ: ಹಿಂದೂ ಸಮಾಜೋತ್ಸವ ಆಯೋಜನಾ ಸಮಿತಿ, ಸ್ಥಳ: ಬಾಲಗಂಗಾಧರನಾಥ ಸ್ವಾಮೀಜಿ ಕ್ರಿಡಾಂಗಣ, ಎಂ.ಸಿ. ಲೇಔಟ್, ಗೋವಿಂದರಾಜನಗರ, ಸಂಜೆ 4

ಜೈನ್ ಸಾಹಿತ್ಯ ಸಿರಿ: ‘ಕವಿಚಕ್ರವರ್ತಿ ರನ್ನ: ಕಾವ್ಯಾನುಸಂಧಾನ’ ವಿಷಯದ ಬಗ್ಗೆ ಉಪನ್ಯಾಸ: ಬಾಳಾಸಾಹೇಬ ಲೋಕಾಪುರ, ಅಧ್ಯಕ್ಷತೆ: ಸಂತೋಷ್ ಹಾನಗಲ್, ಉಪಸ್ಥಿತಿ: ಮಮತ ಕಾಂತರಾಜ್, ನಾಗಶ್ರೀ ಮುಪ್ಪಾನೆ, ಆಯೋಜನೆ: ಜೈನ್ ಮಿಲನ್ ಬೆಂಗಳೂರು ಸೆಂಟ್ರಲ್ ಸ್ಥಳ: ಚಕ್ರೇಶ್ವರಿ ಮಹಿಳಾ ಸಮಾಜ,  ಆನೆಬಂಡೆ ರಸ್ತೆ, ಜಯನಗರ 3ನೇ ಬಡಾವಣೆ, ಸಂಜೆ 4.15 

‘ನಮ್ಮ ಹಟ್ಟಿ...ಆತ್ಮಕತೆ...’ ಪುಸ್ತಕ ಬಿಡುಗಡೆ: ಕೋಟಿಗಾನಹಳ್ಳಿ ರಾಮಯ್ಯ, ಅಧ್ಯಕ್ಷತೆ: ಬಸವರಾಜ ಕೌತಾಳ್, ಅತಿಥಿಗಳು: ಅಗ್ರಹಾರ ಕೃಷ್ಣಮೂರ್ತಿ, ನೆಲ್ಲುಕುಂಟೆ ವೆಂಕಟೇಶಯ್ಯ, ಗಂಗಮ್ಮ ಕೆಂಪಣ್ಣ, ಪುಸ್ತಕದ ಬಗ್ಗೆ ಮಾತು: ವಿ.ಎಲ್.ನರಸಿಂಹಮೂರ್ತಿ, ರವಿಕುಮಾರ ಬಾಗಿ, ಆಯೋಜನೆ: ರವಿಕುಮಾರ್ ಈಚಲಮರ, ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರ ಕೃಪಾ ರಸ್ತೆ, ಸಂಜೆ 4.30

‘ಪುರಾಣ ಗೀತಂ’ 17ನೇ ಭಾರತೀಯ ಶಾಸ್ತ್ರೀಯ ಸಂಗೀತೋತ್ಸವ: ‘ಸಾಮಗಾನ ಮಾತಂಗ ರಾಷ್ಟ್ರೀಯ ಪ್ರಶಸ್ತಿ’ ಪುರಸ್ಕೃತರು: ಗಣೇಶ್ ರಾಜಗೋಪಾಲನ್, ಕುಮರೇಶ್ ರಾಜಗೋಪಾಲನ್, ‘ಸಾಮಗಾನ ವಸಂತ ಪ್ರಶಸ್ತಿ’ ಪುರಸ್ಕೃತರು: ಸ್ಫೂರ್ತಿ ರಾವ್, ಅತಿಥಿಗಳು: ಎಸ್.ಆರ್. ರಾಮಕೃಷ್ಣ, ಎಂ.ಪಿ. ಶ್ಯಾಮ್, ಕರ್ನಾಟಕ ಶಾಸ್ತ್ರೀಯ ಸಂಗೀತ: ಹರಿಶಂಕರ್ ಕೆ.ಎಸ್., ಆಯೋಜನೆ: ಭಾರತೀಯ ಸಾಮಗಾನ ಸಭಾ, ಸ್ಥಳ: ಚೌಡಯ್ಯ ಸ್ಮಾರಕ ಸಭಾಂಗಣ, ವೈಯಾಲಿ ಕಾವಲ್, ಸಂಜೆ 5

ದತ್ತಿ ಉಪನ್ಯಾಸ: ‘ಯಶೋಧರ ಚರಿತೆ’ ವಿಷಯದ ಬಗ್ಗೆ: ಪ್ರೊ.ಎಸ್.ಪಿ. ಅಜಿತ್ ಪ್ರಸಾದ್, ಅಧ್ಯಕ್ಷತೆ: ಆರ್. ಲಕ್ಷ್ಮೀನಾರಾಯಣ, ಸ್ಥಳ: ಎಂ.ವಿ.ಸೀ. ಸಭಾಂಗಣ, ಬಿ.ಎಂ.ಶ್ರೀ. ಕಲಾಭವನ, ಸಂಜೆ 5

ಪಾವಗಡ ಪ್ರಕಾಶರಾವ್ ಅವರಿಂದ ಕವಿ ಲಕ್ಷ್ಮೀಶರ ‘ಜೈಮಿನಿ ಭಾರತ’ ಉಪನ್ಯಾಸ ಮಾಲಿಕೆ ಸಮಾರೋಪ ಸಮಾರಂಭ: ಭಾಗವಹಿಸುವವರು: ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶಿವಾನಂದ ಭಾರತೀ ಚಿಂತಾಮಣಿ ಸ್ವಾಮೀಜಿ, ಆಯೋಜನೆ: ಡಾ. ಪಾವಗಡ ಪ್ರಕಾಶರಾಯರ ಅಮೃತ ಮಹೋತ್ಸವ ಸಮಿತಿ, ಸ್ಥಳ: ಪತ್ತಿ ಸಭಾಂಗಣ, ಶ್ರೀರಾಮಮಂದಿರ, ಎನ್.ಆರ್. ಕಾಲೊನಿ, ಸಂಜೆ 5.45

‘ಬೀಯಿಂಗ್ ಹೈಪರ್ ಹ್ಯೂಮನ್’ ಅಂತರರಾಷ್ಟ್ರೀಯ ಛಾಯಾಚಿತ್ರ ಪ್ರದರ್ಶನ: ಆಯೊಜನೆ: ಸೃಷ್ಟಿ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್ ಡಿಸೈನ್ ಆ್ಯಂಡ್ ಟೆಕ್ನಾಲಜಿ, ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್, ಸ್ಥಳ: ವೆಂಕಟಪ್ಪ ಆರ್ಟ್ ಗ್ಯಾಲರಿ, ಕಸ್ತೂರಬಾ ರಸ್ತೆ, ಸಂಜೆ 6

ಹಿಂದೂ ಸಮಾಜೋತ್ಸವ: ಸಾನ್ನಿಧ್ಯ: ಸ್ವಾಮಿ ಗಿರಿಜಾತ್ಮಾನಂದ, ಅತಿಥಿಗಳು: ಟಿ.ಎ.ಪಿ. ಶೆಣೈ, ಮೀರಾ ಭಾಯಿ, ಆಯೋಜನೆ: ಹಿಂದೂ ಸಮಾಜೋತ್ಸವ ಆಯೋಜನಾ ಸಮಿತಿ, ಸ್ಥಳ: ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ, ಕೆಂಗುಂಟೆ ಆಟದ ಮೈದಾನ, ಸಂಜೆ 6.30 (ಸಂಜೆ 4ರಿಂದ ಸಾಂಸ್ಕೃತಿಕ ಕಾರ್ಯಕ್ರಮ)

‘ಮುದ್ದಣ್ಣನ ಪ್ರಮೋಷನ್ ಪ್ರಸಂಗ’ ಹಾಸ್ಯ ನಾಟಕ ಪ್ರದರ್ಶನ: ನಿರ್ದೇಶನ ಅಶೋಕ್ ಬಿ., ಆಯೋಜನೆ: ವಿಶ್ವಪಥ ಕಲಾ ಸಂಗಮ, ಸ್ಥಳ: ಅಶ್ವತ್ಥ ಕಲಾ ಭವನ, ಎನ್.ಆರ್.ಕಾಲೊನಿ, ಸಂಜೆ 7

ಇಂಗ್ಲಿಷ್‌ನಲ್ಲಿ ‘ಜಾಂಬವತಿ ಕಲ್ಯಾಣ’ ಯಕ್ಷಗಾನ ಪ್ರದರ್ಶನ: ಭಾಗವತಿಕೆ: ದೀಪಕ್ ತುಳುಪುಲೆ, ಚೆಂಡೆ: ಪೃಥ್ವಿ ಬಡೆಕ್ಕಿಲ, ಮದ್ದಳೆ: ಪ್ರಜೇಶ್ ದೇಂದಡ್ಕ, ಚಕ್ರತಾಳ: ಪ್ರದೀಪ್ ಬಿ., ಮುಮ್ಮೇಳ: ಆರತಿ ಪಟ್ರಮೆ, ಶ್ರೀಶಂಕರ ಜೋಯಿಸ ಬಿ., ಸಿಬಂತಿ ಪದ್ಮನಾಭ, ತೇಜು ವಿಘ್ನೇಶ, ಸಂವೃತ್ ಶರ್ಮಾ, ವಾರಿಧಿ, ಪ್ರಸ್ತುತಿ: ಯಕ್ಷದೀವಿಗೆ ತುಮಕೂರು, ಆಯೋಜನೆ: ದಿ ಮಿಥಿಕ್ ಸೊಸೈಟಿ, ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟೋರಿಕಲ್ ರಿಸರ್ಚ್, ಸ್ಥಳ: ಜನಸೇವಾ ವಿದ್ಯಾಕೇಂದ್ರ, ಚನ್ನೇನಹಳ್ಳಿ, ಮಾಗಡಿ ರಸ್ತೆ, ಸಂಜೆ 7

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.