ADVERTISEMENT

ಬೆಂಗಳೂರು: ಗನ್‌ ತೋರಿಸಿ ಹಣ ಕೊಡುವಂತೆ ಬೆದರಿಕೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2025, 16:17 IST
Last Updated 13 ಮಾರ್ಚ್ 2025, 16:17 IST
<div class="paragraphs"><p>ಬಂದೂಕು ( ಸಾಂಕೇತಿಕ ಚಿತ್ರ)</p></div>

ಬಂದೂಕು ( ಸಾಂಕೇತಿಕ ಚಿತ್ರ)

   

ಬೆಂಗಳೂರು: ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿ ಅಪಹರಿಸಿ ಗನ್‌ ತೋರಿಸಿ ಹಣಕ್ಕೆ ಬೇಡಿಕೆಯಿಟ್ಟಿದ್ದ ಆರು ಮಂದಿ ಅಪರಿಚಿತರ ವಿರುದ್ಧ ಎಚ್‌ಎಎಲ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಶ್ಚಿಮ ಬಂಗಾಳದ ಎಸ್‌.ಕೆ. ಫಾರೂಕ್‌ ಅವರು ಕುಂದನಹಳ್ಳಿಯ ಶೋಭಾ ಅಪಾರ್ಟ್‌ಮೆಂಟ್‌ನಲ್ಲಿ ನೆಲಸಿದ್ದರು. ಫಾರೂಕ್‌ ಅವರು ಸ್ಕೂಟಿಯಲ್ಲಿ ಮುರುಗೇಶ ಪಾಳ್ಯದ ಸಿಗ್ನಲ್‌ ಬಳಿ ತೆರಳುತ್ತಿದ್ದರು. ಆಗ ಅವರನ್ನು ಅಡ್ಡಗಟ್ಟಿದ ಆರು ಮಂದಿ ಆರೋಪಿಗಳು ಕಾರಿನಲ್ಲಿ ಅಪಹರಿಸಿದ್ದರು. ಎಸ್‌ಎಂಬಿಟಿ ರೈಲ್ವೆ ನಿಲ್ದಾಣದ ಬಳಿಗೆ ಕರೆದೊಯ್ದು ಗನ್ ತೋರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಆಗ ಫಾರೂಕ್‌ ಅವರು ಅಪರಿಚಿತರಿಂದ ತಪ್ಪಿಸಿಕೊಂಡು ಬಂದು ದೂರು ನೀಡಿದ್ದಾರೆ. ಅವರು ನೀಡಿದ ದೂರು ಆಧರಿಸಿ ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.