ಬಿ.ಕೆ.ರವಿ
ಬೆಂಗಳೂರು: ಕರ್ನಾಟಕ ರಾಜ್ಯ ಪತ್ರಿಕೋದ್ಯಮ ಅಧ್ಯಾಪಕರ ಸಂಘದ ಅಧ್ಯಕ್ಷರಾಗಿ ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಬಿ.ಕೆ. ರವಿ ಅವರು ಮರು ಆಯ್ಕೆಯಾಗಿದ್ದಾರೆ.
ಇಲ್ಲಿನ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ ಕಚೇರಿಯಲ್ಲಿ ಭಾನುವಾರ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಪದಾಧಿಕಾರಿಗಳ ವಿವರ:
ಹಿರಿಯ ಉಪಾಧ್ಯಕ್ಷ–ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕುಲಪತಿ ನಿರಂಜನ ವಾನಳ್ಳಿ. ಉಪಾಧ್ಯಕ್ಷರು – ಮಮತಾ(ಮೈಸೂರು), ಶೈಲಶ್ರೀ(ಬೆಂಗಳೂರು), ಜೆ.ಎಂ.ಚಂದುನವರ(ಧಾರವಾಡ), ಓಂಕಾರ ಕಾಕಡೆ(ವಿಜಯಪುರ). ಪ್ರಧಾನ ಕಾರ್ಯದರ್ಶಿ–ಪ್ರಶಾಂತ(ಬೆಂಗಳೂರು), ಕಾರ್ಯದರ್ಶಿ – ಭಾಸ್ಕರ ಹೆಗಡೆ(ಉಜಿರೆ), ಖಜಾಂಚಿ- ಟಿ.ಶಾರದಾ(ಬೆಂಗಳೂರು). ಮಾಧ್ಯಮ ಸಂಯೋಜಕ – ರಾಜೇಶ್ವರಿ ತಾರಕೇಶ್ (ಬೆಂಗಳೂರು),
ಸಂಘಟನಾ ಕಾರ್ಯದರ್ಶಿಗಳು – ಬಿ.ಟಿ.ಮುದ್ದೇಶ(ತುಮಕೂರು), ವಾಹಿನಿ ಅರವಿಂದ (ಬೆಂಗಳೂರು), ರಾಕೇಶ ತಾಳೀಕೋಟೆ (ಬಳ್ಳಾರಿ), ಶಿವಕುಮಾರ ಕಣಸೋಗಿ(ದಾವಣಗೆರೆ), ಸತೀಶಕುಮಾರ(ಶಿವಮೊಗ್ಗ), ಜೀವರಾಜ (ಬೆಂಗಳೂರು).
ಕಾರ್ಯಕಾರಿ ಸಮಿತಿ ಸದಸ್ಯರು – ಮಹೇಶ (ಬೆಂಗಳೂರು), ಜೆನಿನ್ (ಬೆಂಗಳೂರು), ಪುಟ್ಟಸ್ವಾಮಿ (ಮೈಸೂರು), ಸೌಮ್ಯಾ(ಮಂಗಳೂರು), ತಹಮೀನಾ ಕೋಲಾರ(ವಿಜಯಪುರ), ರಾಘವೇಂದ್ರ (ಬೆಂಗಳೂರು), ವಿಜಯ(ಕೋಲಾರ), ತೇಜಸ್ವಿ ನವಿಲೂರ (ಮೈಸೂರು), ಸಿಬಂತಿ ಪದ್ಮನಾಭ (ತುಮಕೂರು), ಭಾಗ್ಯಲಕ್ಷ್ಮಿ ಪದಕಿ (ಬೆಂಗಳೂರು), ಸಿ.ಎಸ್.ಮಂಜುಳಾ (ಹಾಸನ).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.