ಬೆಂಗಳೂರು: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಸೋಮವಾರ ವಿಶ್ವ ಮಹಿಳಾ ದಿನ ಆಚರಿಸಲಾಯಿತು.
ಮಕ್ಕಳ ಹೃದ್ರೋಗ ತಜ್ಞರಾದ ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ, ‘ಹೆಣ್ಣು ಸಹನಾಮೂರ್ತಿ. ಹುಟ್ಟಿನಿಂದ ಮುಪ್ಪಿನವರೆಗೂ ಮಹಿಳೆಯೇ ಪೋಷಕಿ
ಯಾಗಿರುತ್ತಾಳೆ. ಮಹಿಳೆಯರ ಸ್ವಾಸ್ಥ್ಯವೇ ಸಮಾಜದ ಸ್ವಾಸ್ಥ್ಯ’ ಎಂದರು.
ಮಹಿಳೆಯರ ಮೇಲಿನ ದೌರ್ಜನ್ಯ ವಿರುದ್ಧ ಅರಿವು ಮೂಡಿಸುವ ನಿಟ್ಟಿನಲ್ಲಿಮಂಡಳಿಯ ಪಶ್ಚಿಮ ವಿಭಾಗದ ಮಹಿಳಾ ಸಿಬ್ಬಂದಿ ಕಿರುನಾಟಕ ಪ್ರದರ್ಶಿಸಿದರು.ಸಂಧ್ಯಾ ಶೆಣೈ, ‘ಹಾಸ್ಯದೊಂದಿಗೆ ಸರಳ ಜೀವನ’ ಕುರಿತು ಉಪನ್ಯಾಸ ನೀಡಿದರು.ಚಿತ್ರನಟಿ ಚೈತ್ರಾ ರಾವ್ ಮಾತನಾಡಿದರು. ‘ಬೆಳಕು’ ಅಂಧಮಕ್ಕಳ ಅಕಾಡೆಮಿ ಅಧ್ಯಕ್ಷೆ ಅಶ್ವಿನಿ ಅಂಗಡಿಯವರನ್ನು ಸನ್ಮಾನಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.