ಬೆಂಗಳೂರು: ನಗರದ ರೇಸ್ ಕೋರ್ಸ್ ಟರ್ಫ್ ಕ್ಲಬ್ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ.
ಡಿಸಿಪಿ ರವಿಕುಮಾರ್ ನೇತೃತ್ವದಲ್ಲಿ ಈ ದಾಳಿ ನಡೆದಿದೆ.
ಕುದುರೆ ಬಿದ್ದ ಪ್ರಕರಣದ ತನಿಖೆ ಕೈಗೊಂಡಿದ್ದ ಪೊಲೀಸರು. ತನಿಖೆಗೆ ಸಂಬಂಧಪಟ್ಟಂತೆ ಮಹತ್ವ ದಾಖಲೆಗಳನ್ನು ಕಲೆ ಹಾಕಿ ಅದರ ಆಧಾರದಲ್ಲೇ ಈ ದಾಳಿ ಮಾಡಿದೆ.
ಜಾರಿ ಬಿದ್ದ ಕುದುರೆಗಳು
ನವೆಂಬರ್ 17ರಂದು ರೇಸ್ ನಡೆಯುವ ವೇಳೆ ಮೂರು ಕುದುರೆಗಳು ಜಾರಿಬಿದ್ದು,ಇಬ್ಬರು ಜಾಕಿಗಳು ಗಾಯಗೊಂಡಿದ್ದರು. ರೇಸ್ ನಿಲ್ಲಿಸಿದ್ದರಿಂದ ರೊಚ್ಚಿಗೆದ್ದ ಪ್ರೇಕ್ಷಕರು ಗಲಾಟೆ ಮಾಡಿದ್ದರು.
ಅದು ಈ ವರ್ಷದ ಮೊದಲನೇ ರೇಸ್ ಆಗಿತ್ತು. ಮಳೆ ಬಂದಿದ್ದರಿಂದ ಕುದುರೆಗಳು ಓಡುವ ಜಾಗದಲ್ಲಿ ನೀರು ನಿಂತಿತ್ತು. ಮೊದಲೇ ರೇಸಿನಲ್ಲಿ ಹಣ ಕಳೆದುಕೊಂಡವರು ಅರ್ಧದಲ್ಲೇ ರೇಸ್ ನಿಲ್ಲಿಸಿದ್ದರಿಂದ ಪ್ರಕ್ಷೇಕರು ಆವರಣದಲ್ಲಿದ್ದ ಕುರ್ಚಿ, ಟಿ.ವಿ. ಟೇಬಲ್ಗಳನ್ನು ಧ್ವಂಸಗೊಳಿಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರೇಕ್ಷಕರನ್ನು ಚದುರಿಸಿಪರಿಸ್ಥಿತಿ ತಿಳಿಗೊಳಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.