ADVERTISEMENT

ಆರ್‌ಒಗಳ ವರ್ಗಾವಣೆಗೆ ತಿದ್ದುಪಡಿ

ಪ್ರಜಾವಾಣಿ ವರದಿ ಪರಿಣಾಮ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2023, 17:10 IST
Last Updated 2 ಫೆಬ್ರುವರಿ 2023, 17:10 IST

ಬೆಂಗಳೂರು: ಕೇಂದ್ರ ಚುನಾವಣೆ ಆಯೋಗದ ಮಾರ್ಗಸೂಚಿಗೆ ವಿರುದ್ಧವಾಗಿದ್ದ ಬಿಬಿಎಂಪಿ ಕಂದಾಯ ವಿಭಾಗದ ಅಧಿಕಾರಿಗಳ ವರ್ಗಾವಣೆ ಆದೇಶವನ್ನು ತಿದ್ದುಪಡಿ ಮಾಡಿ ನಗರಾಭಿವೃದ್ಧಿ ಇಲಾಖೆ ಗುರುವಾರ ಆದೇಶ ಹೊರಡಿಸಿದೆ.

ಮೂವರು ಕಂದಾಯ ಅಧಿಕಾರಿಗಳನ್ನು ಸ್ವಕ್ಷೇತ್ರದ ವಿಧಾನಸಭೆ ಕ್ಷೇತ್ರಗಳ ಕಚೇರಿಗಳಿಗೆ ಜ.31ರಂದು ವರ್ಗಾವಣೆ ಮಾಡಲಾಗಿತ್ತು. ಈ ಬಗ್ಗೆ ‘ಪ್ರಜಾವಾಣಿ’ ಫೆ.1ರಂದು ವರದಿ ಮಾಡಿತ್ತು.

ಕಂದಾಯ ಅಧಿಕಾರಿಗಳಾದ ಎಸ್‌.ಆರ್‌. ಪ್ರಕಾಶ್‌, ನಾರಾಯಣಸ್ವಾಮಿ, ಡಿ. ಸರಸ್ವತಿ ಅವರನ್ನು ಸ್ವಕ್ಷೇತ್ರಕ್ಕೆ ವರ್ಗಾಯಿಸಲಾಗಿತ್ತು. ಇದೀಗ ಅದನ್ನು ತಿದ್ದುಪಡಿ ಮಾಡಿ, ನಾರಾಯಣಸ್ವಾಮಿ ಅವರನ್ನು ಮಲ್ಲೇಶ್ವರಕ್ಕೆ, ಎಸ್‌.ಆರ್‌. ಪ್ರಕಾಶ್‌ ಅವರನ್ನು ಕೆ.ಆರ್‌. ಪುರಕ್ಕೆ ಹಾಗೂ ಡಿ. ಸರಸ್ವತಿ ಅವರನ್ನು ಕೆಂಗೇರಿ ಕಂದಾಯ ಅಧಿಕಾರಿ ಕಚೇರಿಗೆ ವರ್ಗಾಯಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.