ADVERTISEMENT

ವಿಡಿಯೊ ಸುದ್ದಿ | ಎಚ್ಎಸ್ಆರ್ ಲೇಔಟ್‌ನಲ್ಲಿ ಯಮ-ಕಿಂಕರರ ಸಂಚಾರ!

ಕೊರೊನಾ ಜಾಗೃತಿ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2020, 15:11 IST
Last Updated 19 ಏಪ್ರಿಲ್ 2020, 15:11 IST
ಕಾನ್‌ಸ್ಟೆಬಲ್ ಶಂಕರ್ ಯಮನ ವೇಷ ಧರಿಸಿದ್ದರೆ ಕಾನ್‌ಸ್ಟೆಬಲ್‌ಗಳಾದ ಬಸವರಾಜ ಕಲ್ಲಳ್ಳಿ ಹಾಗೂ  ಶಾಂತಕುಮಾರ ಕಿಂಕರ ವೇಷ ಧರಿಸಿದ್ದರು
ಕಾನ್‌ಸ್ಟೆಬಲ್ ಶಂಕರ್ ಯಮನ ವೇಷ ಧರಿಸಿದ್ದರೆ ಕಾನ್‌ಸ್ಟೆಬಲ್‌ಗಳಾದ ಬಸವರಾಜ ಕಲ್ಲಳ್ಳಿ ಹಾಗೂ  ಶಾಂತಕುಮಾರ ಕಿಂಕರ ವೇಷ ಧರಿಸಿದ್ದರು   

ಬೆಂಗಳೂರು: ಕೋವಿಡ್-19 ಜಾಗೃತಿ ಮೂಡಿಸಲು ಎಚ್ಎಸ್ಆರ್ ಲೇಔಟ್‌ನಲ್ಲಿ ಭಾನುವಾರ ಯಮ-ಕಿಂಕರರು ಸಂಚರಿಸಿದರು!

ಎಚ್ಎಸ್ಆರ್ ಲೇಔಟ್‌ ಠಾಣೆ ಇನ್‌ಸ್ಪೆಕ್ಟರ್ ರಾಘವೇಂದ್ರ ನೇತೃತ್ವದಲ್ಲಿ ಯಮ ಹಾಗೂ ಕಿಂಕರರ ವೇಷ ತೊಟ್ಟ ಸಿಬ್ಬಂದಿ ಠಾಣೆ ವ್ಯಾಪ್ತಿಯಲ್ಲಿ ಓಡಾಡಿ ಜಾಗೃತಿ ಮೂಡಿಸಿದರು. ಲಾಕ್‌ಡೌನ್ ವೇಳೆಯಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದವರಿಗೆ ಬುದ್ದಿ ಹೇಳಿದರು.

ಕಾನ್‌ಸ್ಟೆಬಲ್ ಶಂಕರ್ ಯಮನ ವೇಷ ಧರಿಸಿದ್ದರೆ ಕಾನ್‌ಸ್ಟೆಬಲ್‌ಗಳಾದ ಬಸವರಾಜ ಕಲ್ಲಳ್ಳಿ ಹಾಗೂಶಾಂತಕುಮಾರ ಕಿಂಕರರ ವೇಷ ಧರಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.