ADVERTISEMENT

ಸೋಂಕು ತಡೆಗೆ ಸನ್ನದ್ಧ: ಶ್ರೀರಾಮುಲು

ಈವರೆಗೆ ₹ 36 ಕೋಟಿ ವೆಚ್ಚ– ಆರೋಗ್ಯ ಸಚಿವ ಬಿ. ಶ್ರೀರಾಮುಲು

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2020, 22:12 IST
Last Updated 16 ಮಾರ್ಚ್ 2020, 22:12 IST
ಶ್ರೀರಾಮುಲು
ಶ್ರೀರಾಮುಲು   

ಬೆಂಗಳೂರು: ‘ಕೋವಿಡ್‌– 19 ಹರಡದಂತೆ ರಾಜ್ಯ ಸರ್ಕಾರ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದು, ಹಣಕಾಸಿನ ಕೊರತೆ ಇಲ್ಲ’ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಸ್ಪಷ್ಟಪಡಿಸಿದರು.

ಕೋವಿಡ್‌– 19 ಕುರಿತು ವಿಧಾನಪರಿಷತ್‌ನಲ್ಲಿ‌ಸೋಮವಾರನಡೆದ ಚರ್ಚೆಗೆಉತ್ತರಿಸಿದ ಅವರು, ‘ಮುನ್ನೆಚ್ಚರಿಕೆಕ್ರಮ ವಹಿಸಲು ₹36 ಕೋಟಿ ವೆಚ್ಚ ಮಾಡಿದ್ದೇವೆ. ಕೇಂದ್ರದ ನೆರವೂ ಪಡೆಯುತ್ತೇವೆ’ ಎಂದು ಅವರು ಹೇಳಿದರು.

‘ಕನಿಷ್ಠ ಮೂರು ತಿಂಗಳಿಗೆ ಸಾಕಾಗುವಷ್ಟು ಮಾಸ್ಕ್‌ಗಳು ಲಭ್ಯವಿದ್ದು, ಜೆನರಿಕ್ ಔಷಧಾಲಯಗಳಲ್ಲಿ ಸಿಗುತ್ತಿದೆ. ಕಾಳಸಂತೆಯಲ್ಲಿ ಮಾಸ್ಕ್
ಮಾರಾಟ ಮಾಡುವವರ ಮತ್ತು ಬಳಸಿದ ಮಾಸ್ಕ್ ಸ್ವಚ್ಛಗೊಳಿಸಿ‌ ಮಾರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಶ್ರೀರಾಮುಲು ಅವರು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.