ADVERTISEMENT

ನಾಲ್ಕೂವರೆ ಟ್ರ್ಯಾಕ್ಟರ್‌ ಹುಲ್ಲಿಗೆ ₹500 ಪರಿಹಾರ!

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2019, 20:08 IST
Last Updated 15 ಮಾರ್ಚ್ 2019, 20:08 IST

ದಾಬಸ್‌ಪೇಟೆ: ನಾಲ್ಕೂವರೆ ಟ್ರ್ಯಾಕ್ಟರ್‌ ಹುಲ್ಲುಬೆಂಕಿಗೆ ಆಹುತಿಯಾದ ಪ್ರಕರಣದಲ್ಲಿ ಕೃಷಿ ಇಲಾಖೆ ರೈತರೊಬ್ಬರಿಗೆ ವರ್ಷದ ಬಳಿಕ ₹ 500 ಪರಿಹಾರ ಬಿಡುಗಡೆ ಮಾಡಿದೆ. ಇದನ್ನು ಪಡೆಯಲು ರೈತವೆಂಕಟಪ್ಪ ನಿರಾಕರಿಸಿದ್ದಾರೆ.

2018ರ ಮಾರ್ಚ್‌ 23ರಂದು ನೆಲಮಂಗಲ ತಾಲ್ಲೂಕು ಇಮಚೇನಹಳ್ಳಿ ಪಾಳ್ಯದ ವೆಂಕಟಪ್ಪ ಅವರ ಹುಲ್ಲಿನ ಬಣವೆ ಬೆಂಕಿಗೆ ಆಹುತಿಯಾಗಿತ್ತು.

‘ಇಲಾಖಾ ಮಾರ್ಗಸೂಚಿಯಂತೆ ಪರಿಹಾರ ನೀಡಿದ್ದೇವೆ’ ಎಂದು ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕಿ ಸುಶೀಲಮ್ಮ ಪ್ರತಿಕ್ರಿಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.