ADVERTISEMENT

ಮೂಲಸೌಕರ್ಯಕ್ಕೆ ದಲಿತರ ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2019, 19:23 IST
Last Updated 6 ಅಕ್ಟೋಬರ್ 2019, 19:23 IST
ಸಮಿತಿಯ ಸದಸ್ಯರು ಜಂಟಿ‌ ಆಯುಕ್ತರಿಗೆ ಮನವಿ ಸಲ್ಲಿಸಿದರು
ಸಮಿತಿಯ ಸದಸ್ಯರು ಜಂಟಿ‌ ಆಯುಕ್ತರಿಗೆ ಮನವಿ ಸಲ್ಲಿಸಿದರು   

ಕೆ.ಆರ್.ಪುರ: ದಲಿತರ ಕಾಲೊನಿಗಳಲ್ಲಿ ಮೂಲಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ಬೆಂಗಳೂರು ಪೂರ್ವ ತಾಲ್ಲೂಕು ‌ಆದಿಜಾಂಬವ ಜನಸಂಘ ಸಮಿತಿಯ ಸದಸ್ಯರು ಮಹದೇವಪುರ ವಲಯ ಜಂಟಿ‌ ಆಯುಕ್ತ ವೆಂಕಟಾ ಚಲಪತಿ ಅವರಿಗೆ ಮನವಿ ಸಲ್ಲಿಸಿದರು.

ಪೂರ್ವ ತಾಲ್ಲೂಕು ಅಧ್ಯಕ್ಷ ವಿ.ಕೃಷ್ಣಮೂರ್ತಿ, ‘ಕೆ.ಆರ್.ಪುರ ಮತ್ತು ಮಹದೇವಪುರ ಕ್ಷೇತ್ರದ ದಲಿತ ಕಾಲೊನಿಗಳು ಮೂಲಸೌಕರ್ಯ
ಗಳಿಂದ‌‌ ವಂಚಿತಗೊಂಡಿವೆ. ಹದಗೆಟ್ಟ ರಸ್ತೆಗಳು, ಚರಂಡಿ, ವಸತಿ, ನೀರು ವ್ಯವಸ್ಥೆ ಸಮರ್ಪಕವಾಗಿಲ್ಲ. ವಾಸಿಸಲು ಯೋಗ್ಯವಾಗಿಲ್ಲ’ ಎಂದರು.

ಪ್ರಧಾನ ಕಾರ್ಯದರ್ಶಿ ಬಿ.ಆರ್.ಮಾದೇಶ್, ‘ಮೂಲಸೌಲಭ್ಯಗಳು ಸಿಗದೆ ಸಮುದಾಯದ ಜನರು ಪರದಾಡುತ್ತಿದ್ದಾರೆ. ಜನಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಸಮಿತಿಯ ಉಪಾಧ್ಯಕ್ಷರಾದ ವೆಂಕಟಸ್ವಾಮಿ, ಚಂದ್ರಶೇಖರ, ಕಾರ್ಯಾಧ್ಯಕ್ಷ ಮುನಿರಾಜು, ಜಂಟಿ ಕಾರ್ಯದರ್ಶಿ ಶಿವಕುಮಾರ್, ಶಶಿಕುಮಾರ್, ರಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.