ADVERTISEMENT

ಕೆಂಗೇರಿ | ‘ಸಹಕಾರ ಕ್ಷೇತ್ರದಲ್ಲಿ ದಲಿತರಿಗಿಲ್ಲ ಪ್ರಾತಿನಿಧ್ಯ’

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2025, 23:50 IST
Last Updated 21 ಡಿಸೆಂಬರ್ 2025, 23:50 IST
ಎಂ.ಎಚ್.ಜಯಪ್ರಕಾಶ ನಾರಾಯಣರ 99ನೇ ಜನ್ಮ ದಿನಾಚರಣೆಯಲ್ಲಿ ಜಿ.ಟಿ. ದೇವೇಗೌಡ,  ಪಿವಿಪಿ ಟ್ರಸ್ಟ್ ಅಧ್ಯಕ್ಷ ಎಸ್. ಮರಿಸ್ವಾಮಿ, ಕಾರ್ಯದರ್ಶಿ ಎಂ.ಮಹದೇವ್, ಎಸ್. ಶಿವಮಲ್ಲು, ಡಾ. ಬಿ. ಎನ್. ಉಮೇಶ್ ಭಾಗವಹಿಸದ್ದರು
ಎಂ.ಎಚ್.ಜಯಪ್ರಕಾಶ ನಾರಾಯಣರ 99ನೇ ಜನ್ಮ ದಿನಾಚರಣೆಯಲ್ಲಿ ಜಿ.ಟಿ. ದೇವೇಗೌಡ,  ಪಿವಿಪಿ ಟ್ರಸ್ಟ್ ಅಧ್ಯಕ್ಷ ಎಸ್. ಮರಿಸ್ವಾಮಿ, ಕಾರ್ಯದರ್ಶಿ ಎಂ.ಮಹದೇವ್, ಎಸ್. ಶಿವಮಲ್ಲು, ಡಾ. ಬಿ. ಎನ್. ಉಮೇಶ್ ಭಾಗವಹಿಸದ್ದರು   

ಕೆಂಗೇರಿ: ನಾಲ್ಕಾರು ದಶಕಗಳು ಕಳೆದರೂ ಸಹಕಾರ ಕ್ಷೇತ್ರದಲ್ಲಿ ದಲಿತರಿಗೆ ಸೂಕ್ತ ಪ್ರಾತಿನಿಧ್ಯ ಸಿಗಲಿಲ್ಲ ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿದರು. 

ಎಂ.ಎಚ್. ಜಯಪ್ರಕಾಶ್ ನಾರಾಯಣ ಅವರ 99ನೇ ಜನ್ಮ ದಿನದ ಅಂಗವಾಗಿ ಡಾ. ಅಂಬೇಡ್ಕರ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ 99ನೇ ಸಂಸ್ಥಾಪಕ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

‘ಜಿಲ್ಲಾ ಯೂನಿಯನ್‌ಗಳಲ್ಲಿ ಒಬ್ಬ ದಲಿತನಿಗೂ ಅಧ್ಯಕ್ಷ ಸ್ಥಾನ ನೀಡಿರಲಿಲ್ಲ. ನನ್ನ ಅವಧಿಯಲ್ಲಿ ದಲಿತರೊಬ್ಬರು ಅಧ್ಯಕ್ಷರಾಗಿ ಆಯ್ಕೆಯಾಗಲು ಸಾಧ್ಯವಾಯಿತು. ಜಾತಿ ವಿರೋಧಿಸುವ ನಾಯಕರೇ ಅದರ ಪೋಷಣೆಯಲ್ಲಿ ತೊಡಗಿದ್ದಾರೆ. ನೇರ ನುಡಿ ಉಳ್ಳವರು ರಾಜಕೀಯ ಕ್ಷೇತ್ರದಲ್ಲಿ ಅಸ್ತಿತ್ವ ಕಂಡುಕೊಳ್ಳುವುದು ಕಷ್ಟ’ ಎಂದು ಹೇಳಿದರು. 

ADVERTISEMENT

ಪಿವಿಪಿ ಟ್ರಸ್ಟ್‌ನ ಕಾರ್ಯದರ್ಶಿ ಎಂ. ಮಹದೇವ್ ಮಾತನಾಡಿ, ‘ಕೆಲವು ರಾಜಕಾರಣಿಗಳು ಮಾತ್ರ ತಮ್ಮ ಕೊಡುಗೆಗಳ ಮೂಲಕ ಜನಸಾಮಾನ್ಯರಲ್ಲಿ ಶಾಶ್ವತವಾಗಿ ನೆಲೆಸುತ್ತಾರೆ. ಜಿ.ಟಿ. ದೇವೇಗೌಡ ಅವರು ಜಾತ್ಯತೀತರಾಗಿ ದಲಿತರೊಂದಿಗೆ ಅನುಪಮ ಸಂಬಂಧ ಹೊಂದಿದ್ದು, ಸಮಾಜದ ಅಭಿವೃದ್ಧಿಗೆ ಮುನ್ನುಡಿ ಬರೆಯುವ ಮೂಲಕ ಸಾಮಾಜಿಕ ಬದಲಾವಣೆಗೆ ಕಾರಣರಾಗಿದ್ದಾರೆ’ ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.