ಬೆಂಗಳೂರು: ಆಯುಧ ಪೂಜೆ ಆಚರಣೆಗೆ ಅನುಮತಿ ನೀಡಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ
(ಕೆಎಸ್ಆರ್ಟಿಸಿ), ಬಸ್ಗಳ ಪೂಜೆಗಾಗಿ ತಲಾ ₹100 ನೀಡಲು ಆದೇಶಿಸಿದೆ.
ಈ ಹಿಂದೆ ₹40 ಇದ್ದು, ₹100ಕ್ಕೆ ಏರಿಕೆ ಮಾಡಲಾಗಿದೆ. ಇಲಾಖೆಯ ಜೀಪು, ಕಾರು ಹಾಗೂ ಇತರ ವಾಹನಗಳಿಗೆ ₹40 ನಿಗದಿ ಮಾಡಿದೆ. ಕೇಂದ್ರೀಯ ಕಾರ್ಯಾಗಾರಕ್ಕೆ ₹3,000 ಮತ್ತು ವಿಭಾಗೀಯ ಕಾರ್ಯಾಗಾರಗಳಿಗೆ ತಲಾ ₹1,000 ನೀಡಲು ಆದೇಶದಲ್ಲಿ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.