ADVERTISEMENT

ದುಡ್ಡು ಬಾಚಿಕೊಳ್ಳುವತ್ತ ಸಚಿವರ ಆಸಕ್ತಿ: ಡಿಕೆ ಶಿವಕುಮಾರ್

ಉತ್ತರ ಕೊಡಿ ಯಡಿಯೂರಪ್ಪ ಅಭಿಯಾನ

​ಪ್ರಜಾವಾಣಿ ವಾರ್ತೆ
Published 18 ಜುಲೈ 2020, 22:02 IST
Last Updated 18 ಜುಲೈ 2020, 22:02 IST
   

ಬೆಂಗಳೂರು: ‘ಕೊರೊನಾದಿಂದ ಜನರನ್ನು ರಕ್ಷಿಸಲು ಧಾವಿಸಬೇಕಾದ ಸಚಿವರು ದುಡ್ಡು ಬಾಚಿಕೊಳ್ಳುವತ್ತ ಗಮನ ಹರಿಸಿದ್ದಾರೆ. ಈ ಹಗರಣಗಳ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪನವರೇ ಉತ್ತರ ಕೊಡಿ’ ಎಂದು ಕೆ‍ಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ.

ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ಅವರು,‘ಕರ್ನಾಟಕದಲ್ಲಿ ಪ್ರತಿಹಂತದಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ವೆಂಟಿಲೇಟರ್, ಪಿಪಿಇ ಕಿಟ್‌ ಹೀಗೆ ಎಲ್ಲ ವಸ್ತುಗಳ ಖರೀದಿಗಳಲ್ಲೂ ಅಕ್ರಮ ನಡೆದಿವೆ. ಭ್ರಷ್ಟಾಚಾರ ‍ಪ್ರಮಾಣ ಶೇ 200ರಿಂದ ಶೇ 500ರವರೆಗೆ ಇದೆ’ ಎಂದು ಹರಿಹಾಯ್ದರು.

‘ಈ ಹಗರಣಗಳ ಬಗ್ಗೆ ಬೆಳಕು ಚೆಲ್ಲಿರುವ ಮಾಧ್ಯಮಗಳು ರಾಜಕೀಯ ಅಜೆಂಡಾ ಇಟ್ಟುಕೊಂಡಿಲ್ಲ. ಹೀಗಾಗಿ ಉತ್ತರ ಕೊಡಬೇಕು’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.