ADVERTISEMENT

ಮದ್ಯ ಸಿಗದಿದ್ದಕ್ಕೆ ಮನೆಯನ್ನೇ ತೊರೆದ!

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2020, 20:25 IST
Last Updated 2 ಏಪ್ರಿಲ್ 2020, 20:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ನಗರದಲ್ಲಿ ಮದ್ಯದಂಗಡಿಗಳು ಬಂದ್ ಆಗಿವೆ. ಇದರ ನಡುವೆಯೇ ಮದ್ಯ ಸಿಗದಿದ್ದರಿಂದ ಮಾನಸಿಕವಾಗಿ ಅಸ್ವಸ್ಥಗೊಂಡಿದ್ದರು ಎನ್ನಲಾದ ಪಿಲಿಪ್ಸ್ (46) ಎಂಬುವರು ಮನೆ ಬಿಟ್ಟು ಹೋಗಿದ್ದಾರೆ.

ಈ ಸಂಬಂಧ ಪತ್ನಿ ಲೀಲಾವತಿ ಅವರು ಮಹಾಲಕ್ಷ್ಮಿಪುರ ಠಾಣೆಗೆ ದೂರು ನೀಡಿದ್ದಾರೆ. ಪಿಲಿ‍ಪ್ಸ್ ನಾಪತ್ತೆಯಾದ ಬಗ್ಗೆ ಎಫ್‌ಐಆರ್‌ ದಾಖಲಾಗಿದೆ.

‘ಕುರಬರಹಳ್ಳಿಯ ಜೆ.ಸಿ.ನಗರ ನಿವಾಸಿಯಾದ ಪಿಲಿಪ್ಸ್ ಮದ್ಯವ್ಯಸನಿ ಆಗಿದ್ದರು. ನಿತ್ಯವೂ ಅವರಿಗೆ ಮದ್ಯ ಬೇಕಿತ್ತು. ಕೆಲ ದಿನಗಳಿಂದ ಮದ್ಯದಂಗಡಿಗಳು ಬಂದ್ ಆಗಿದ್ದವು. ಅಷ್ಟಾದರೂ ನಿತ್ಯವೂ ಮದ್ಯದಂಗಡಿ ಬಳಿ ಹೋಗಿ ವಾಪಸು ಮನೆಗೆ ಬರುತ್ತಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ADVERTISEMENT

‘ಮದ್ಯ ಸಿಗದಿದ್ದರಿಂದ ಅವರು ಮಾನಸಿಕವಾಗಿ ಅಸ್ವಸ್ಥಗೊಂಡಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.