ADVERTISEMENT

ಉತ್ತಮ ನಡತೆ ರೂಪುಗೊಳ್ಳಲು ಶಿಕ್ಷಣ ಸಹಕಾರಿ: ಎಂ.ವಿ. ಸತೀಶ್

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2025, 16:09 IST
Last Updated 21 ಡಿಸೆಂಬರ್ 2025, 16:09 IST
ಸಮಾರಂಭದಲ್ಲಿ (ಎಡದಿಂದ ಬಲಕ್ಕೆ) ಶಾಲೆಯ ಮುಖ್ಯ ಶಿಕ್ಷಕಿಯರಾದ ಸುನಂದಾ ವರ್ಮಾ ಮತ್ತು ಪ್ರೇಮಾ, ಅಧ್ಯಕ್ಷೆ ಸಲ್ಲತ್ ಮೇರಿ ಎ., ಕಾರ್ಯದರ್ಶಿ ಎಂ. ನಾಗೇಗೌಡ, ಎಂ.ವಿ. ಸತೀಶ್, ಖಜಾಂಚಿ ಸಿ.ಎಂ. ಶಿವಕುಮಾರ್, ಕುವೆಂಪು ಕಾಲೇಜಿನ ಪ್ರಾಂಶುಪಾಲ ಕುಮಾರ್, ಸಿಇಓ ಆರೋಗ್ಯಪ್ಪ ಇದ್ದರು
ಸಮಾರಂಭದಲ್ಲಿ (ಎಡದಿಂದ ಬಲಕ್ಕೆ) ಶಾಲೆಯ ಮುಖ್ಯ ಶಿಕ್ಷಕಿಯರಾದ ಸುನಂದಾ ವರ್ಮಾ ಮತ್ತು ಪ್ರೇಮಾ, ಅಧ್ಯಕ್ಷೆ ಸಲ್ಲತ್ ಮೇರಿ ಎ., ಕಾರ್ಯದರ್ಶಿ ಎಂ. ನಾಗೇಗೌಡ, ಎಂ.ವಿ. ಸತೀಶ್, ಖಜಾಂಚಿ ಸಿ.ಎಂ. ಶಿವಕುಮಾರ್, ಕುವೆಂಪು ಕಾಲೇಜಿನ ಪ್ರಾಂಶುಪಾಲ ಕುಮಾರ್, ಸಿಇಓ ಆರೋಗ್ಯಪ್ಪ ಇದ್ದರು   

ಪೀಣ್ಯ ದಾಸರಹಳ್ಳಿ: ‘ಮಕ್ಕಳಲ್ಲಿ ಉತ್ತಮ ನಡತೆ, ಭೌತಿಕ ಬೆಳವಣಿಗೆ ರೂಪುಗೊಳ್ಳಲು ಶಿಕ್ಷಣ ಸಹಕಾರಿ ಆಗಿದೆ’ ಎಂದು ಹಿರಿಯ ಉಪ ನೋಂದಣಾಧಿಕಾರಿ ಎಂ.ವಿ. ಸತೀಶ್ ತಿಳಿಸಿದರು. 

ಶೆಟ್ಟಿಹಳ್ಳಿಯ ಸರ್‌ ಎಂ. ವಿಶ್ವೇಶ್ವರಯ್ಯ ವಿದ್ಯಾನಿಕೇತನ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಮಕ್ಕಳು ಕೇವಲ ಅಂಕ ಗಳಿಸುವುದಕ್ಕೆ ಸೀಮಿತವಾಗಬಾರದು. ಇಂದು ಶಾಲಾ ಶಿಕ್ಷಣದ ಜೊತೆಗೆ ನೈತಿಕ ಶಿಕ್ಷಣವನ್ನು ನೀಡುವ ಅಗತ್ಯ ಇದೆ.

ADVERTISEMENT

ಸಮಾರಂಭದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.