ADVERTISEMENT

‘ಕಾನೂನು ಪಾಲಕರಿಗಿಂತ ಭಂಜಕರೆ ಅಧಿಕ’

​ಪ್ರಜಾವಾಣಿ ವಾರ್ತೆ
Published 31 ಜುಲೈ 2018, 15:21 IST
Last Updated 31 ಜುಲೈ 2018, 15:21 IST
ನಗರದ ದಿ ಇನ್‌ಸ್ಟಿಟ್ಯೂಷನ್‌ ಆಫ್‌ ಎಂಜಿನಿಯರ್ಸ್‌ ಸಂಸ್ಥೆ ಮಂಗಳವಾರ ಆಯೋಜಿಸಿದ್ದ ‘ಶಾಸಕರ ಕಾರ್ಯವೈಖರಿ ಮೌಲ್ಯಮಾಪನ’ ಕುರಿತ ಉಪನ್ಯಾಸದಲ್ಲಿ ಶಾಸಕಿ ಸೌಮ್ಯಾ ರೆಡ್ಡಿ ಮಾತನಾಡಿದರು. ಡಾ.ಎ.ಎಸ್‌.ಕೋದಂಡ ಪಾಣಿ ಇದ್ದಾರೆ -ಪ್ರಜಾವಾಣಿ ಚಿತ್ರ
ನಗರದ ದಿ ಇನ್‌ಸ್ಟಿಟ್ಯೂಷನ್‌ ಆಫ್‌ ಎಂಜಿನಿಯರ್ಸ್‌ ಸಂಸ್ಥೆ ಮಂಗಳವಾರ ಆಯೋಜಿಸಿದ್ದ ‘ಶಾಸಕರ ಕಾರ್ಯವೈಖರಿ ಮೌಲ್ಯಮಾಪನ’ ಕುರಿತ ಉಪನ್ಯಾಸದಲ್ಲಿ ಶಾಸಕಿ ಸೌಮ್ಯಾ ರೆಡ್ಡಿ ಮಾತನಾಡಿದರು. ಡಾ.ಎ.ಎಸ್‌.ಕೋದಂಡ ಪಾಣಿ ಇದ್ದಾರೆ -ಪ್ರಜಾವಾಣಿ ಚಿತ್ರ   

ಬೆಂಗಳೂರು:‘ಫ್ಲೆಕ್ಸ್ ನಿಷೇಧ ನನ್ನೊಬ್ಬಳಿಂದ ಸಾಧ್ಯವಿಲ್ಲ. ಎಲ್ಲ ರಾಜಕಾರಣಿಗಳು ಒಟ್ಟಾಗಿ ನಿಷೇಧ ಹೇರಿದಾಗ ಮಾತ್ರ ಸಾಧ್ಯ’ ಎಂದು ಶಾಸಕಿ ಸೌಮ್ಯಾ ರೆಡ್ಡಿ ಹೇಳಿದರು.

ನಗರದದಿ ಇನ್‌ಸ್ಟಿಟ್ಯೂಷನ್‌ ಆಫ್‌ ಎಂಜಿನಿಯರ್ಸ್‌ ಸಂಸ್ಥೆ ಮಂಗಳವಾರ ಆಯೋಜಿಸಿದ್ದ ‘ಶಾಸಕರ ಕಾರ್ಯವೈಖರಿ ಮೌಲ್ಯಮಾಪನ’ ಕುರಿತಉಪನ್ಯಾಸದಲ್ಲಿ ಅವರು ಮಾತನಾಡಿದರು.

‘ನಾನೂ ‌ಪ್ಲಾಸ್ಟಿಕ್‌ ವಿರೋಧಿ, ಸಾಧ್ಯವಾದಷ್ಟು ನಗರ‌ವನ್ನು ಶುಚಿ ಮತ್ತು ಪ್ಲಾಸ್ಟಿಕ್‌ ಮುಕ್ತವಾಗಿಸುವಲ್ಲಿ ಸಾಕಷ್ಟು ಬಾರಿ ಬಿಡಿಎ, ವಿಧಾನ ಸೌಧದಲ್ಲಿ ನಡೆಯುವಚರ್ಚೆಗಳಲ್ಲಿ ಪ್ರಸ್ತಾಪಿಸಿದ್ದೇನೆ. ಕಾನೂನು ಪಾಲಕರಿಗಿಂತ ಕಾನೂನು ಭಂಜಕರೆ ಹೆಚ್ಚಾಗಿರುವಾಗ ಅಭಿವೃದ್ಧಿ ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.

ADVERTISEMENT

ನಗರ ಯೋಜಕ ಡಾ.ಎ.ಎಸ್‌.ಕೋದಂಡ ಪಾಣಿ ಶಾಸಕರ ಕಾರ್ಯವೈಖರಿಯ ಮೌಲ್ಯಮಾಪನ ಕುರಿತು ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.