ADVERTISEMENT

‘ಸೃಜನಶೀಲತೆ ಜೊತೆ ಮಾನವೀಯತೆ ಬೆಳೆಸಲಿ’

ವಿಶ್ವವಿದ್ಯಾಲಯಗಳಲ್ಲಿ ಗುಣಾತ್ಮಕ ಶಿಕ್ಷಣ ಸಾಧನೆಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2020, 3:34 IST
Last Updated 3 ಜುಲೈ 2020, 3:34 IST

ಬೆಂಗಳೂರು:ಕೋವಿಡ್‌ ಬಿಕ್ಕಟ್ಟಿನ ನಂತರ, ಶಿಕ್ಷಣ ವ್ಯವಸ್ಥೆಯನ್ನು ಸಮರ್ಥವಾಗಿ ಮುನ್ನಡೆಸುವ ಕುರಿತು ಕರ್ನಾಟಕ ವಿಶ್ರಾಂತ ಕುಲಪತಿಗಳ ವೇದಿಕೆಯು ಸರ್ಕಾರಕ್ಕೆ ಹಲವು ಸಲಹೆಗಳನ್ನು ನೀಡಿದ್ದು, ಸೃಜನಶೀಲತೆ ಜೊತೆಗೆ ಮಾನವೀಯ ಮೌಲ್ಯಗಳ ಅಳವಡಿಕೆಗೆ ಆದ್ಯತೆ ನೀಡಬೇಕು ಎಂದು ಹೇಳಿದೆ.

ವಿದ್ಯಾರ್ಥಿಯು ತಾನು ಕಲಿಯುತ್ತಿರುವ ವಿಷಯದಲ್ಲಿ ಶ್ರೇಷ್ಠಮಟ್ಟದ ಜ್ಞಾನ ಪಡೆಯುವುದರ ಜೊತೆಗೆ, ವಿಷಯ ವಿಶ್ಲೇಷಣೆಯಲ್ಲಿ ಸೃಜನಶೀಲತೆ ಪಡೆಯಬೇಕು, ಜೊತೆಗೆ ಅತ್ಯುತ್ತಮ ಸಂವಹನ ಕೌಶಲ ಪಡೆಯುವಂತಹ ಶಿಕ್ಷಣ ನೀಡಬೇಕು. ಮುಖ್ಯವಾಗಿ, ಪರಸ್ಪರರ ನಡುವೆ ಸೌಹಾರ್ದ ಸಂಬಂಧ ಪಡೆಯುವ ಮನೋಧರ್ಮ ಬೆಳೆಸುವ, ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುವ ಹೃದಯ ವೈಶಾಲ್ಯ ಮೂಡಿಸುವ ಶಿಕ್ಷಣ ನೀಡುವಂತಾಗಬೇಕು ಎಂದು ವೇದಿಕೆ ಹೇಳಿದೆ.

‘ಪಠ್ಯಕ್ರಮದ ಆಯ್ಕೆಯನ್ನು ಆಯಾ ವಿಶ್ವವಿದ್ಯಾಲಯಗಳ ಆಯ್ಕೆಗೇ ಬಿಡಬೇಕು, ಉಳಿದ ಆದ್ಯತೆಗಳ ಕಡೆಗೆ ಸರ್ಕಾರವು ಗಮನಹರಿಸಿ, ಗುಣಮಟ್ಟದ ಉನ್ನತ ಶಿಕ್ಷಣ ನೀಡಲು ಮುಂದಾಗಬೇಕು’ ಎಂದು ವೇದಿಕೆಯ ಕಾರ್ಯದರ್ಶಿ ಡಾ.ಆರ್.ಎನ್. ಶ್ರೀನಿವಾಸಗೌಡ ಹೇಳಿದ್ದಾರೆ.

ADVERTISEMENT

‘ಬಹುತೇಕ ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರ ಅಥವಾ ಬೋಧಕ ವರ್ಗದ ಕೊರತೆ ಇದೆ. ಮೂಲಸೌಕರ್ಯ ಅಭಿವೃದ್ಧಿಯಾಗಬೇಕಿದೆ. ನಿರ್ವಹಣೆಯ ಮಟ್ಟವೂ ಸುಧಾರಿಸಬೇಕಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.