ADVERTISEMENT

ಯಶವಂತಪುರದ ದಾರಿ ಆಂಜನೇಯ ದೇವಸ್ಥಾನದಲ್ಲಿ ಹನುಮ ಜಯಂತಿ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2024, 16:26 IST
Last Updated 12 ಡಿಸೆಂಬರ್ 2024, 16:26 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಯಶವಂತಪುರದ ದಾರಿ ಆಂಜನೇಯ ದೇವಸ್ಥಾನದಲ್ಲಿ  ಡಿ.13 ರಿಂದ 17ರವರೆಗೆ ಹನುಮ ಜಯಂತಿ ಮಹೋತ್ಸವ ನಡೆಯಲಿದೆ.

ನಿತ್ಯವೂ ದೇವರಿಗೆ ಅಭಿಷೇಕ, ವಿಶೇಷ ಅಲಂಕಾರ, ಕಾರಣಿಕೆ, ಹೂವಿನ ಅಲಂಕಾರ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ. ವಿಶೇಷವಾಗಿ ಪ್ರತಿ ದಿನ ಪಂಚಾಮೃತ ಅಭಿಷೇಕ, ಸತ್ಯನಾರಾಯಣ ಪೂಜೆ, ಸಂಜೆ ದೀಪೋತ್ಸವ, ವಾಯುಸ್ತುತಿಪೂರ್ವಕ ಮಧು ಅಭಿಷೇಕ, ವಾಯುಸ್ತುತಿ ಪುನಶ್ಚರಣ, ಪವಮಾನ ಹೋಮ ಪೂಜಾ ಕೈಂಕರ್ಯಗಳು ನಡೆಯಲಿದೆ ಎಂದು ಶ್ರೀ ದಾರಿ ಆಂಜನೇಯ ಚಾರಿಟಬಲ್‌ ಟ್ರಸ್ಟ್ ಧರ್ಮದರ್ಶಿ ಅಂಬರೀಷ್‌ ತಿಳಿಸಿದ್ದಾರೆ. 

ADVERTISEMENT

ಡಿಸೆಂಬರ್‌ 17ರ ಸಂಜೆ ಯಶವಂತಪುರದ ಪ್ರಮುಖ ಬೀದಿಗಳಲ್ಲಿ ದೇವರ ರಥಯಾತ್ರೆ ನಡೆಯಲಿದ್ದು,  ವಿಶ್ವ ಹಿಂದು ಪರಿಷತ್‌, ಭಜರಂಗದಳ, ಹನುಮಸೇನೆ ಸಂಘಟನೆಗಳು ರಥಯಾತ್ರೆಗೆ ಕೈಜೋಡಿಸಲಿವೆ. ನಿತ್ಯ ಸಂಜೆ ಭಕ್ತಿಗೀತೆ, ಶಾಸ್ತ್ರೀಯ ಸಂಗೀತ ಗಾಯನ, ನೃತ್ಯ, ಭಜನೆ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಆಯೋಜಕರು ಹೇಳಿದ್ದಾರೆ.

ಕಾಸರಗೋಡಿನಲ್ಲಿ ‘ಕನ್ನಡ ಸ್ನೇಹ ಮಿಲನ’ ನಾಳೆ

ಬೆಂಗಳೂರು: ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ವಿಕಾಸ ಟ್ರಸ್ಟ್ ವತಿಯಿಂದ ‘ಬೆಂಗಳೂರು-ಕಾಸರಗೋಡು ಕನ್ನಡ ಸ್ನೇಹ ಮಿಲನ’ ಕಾಸರಗೋಡಿನಲ್ಲಿ ಡಿ.14ರಂದು ನಡೆಯಲಿದೆ.

ಬೇಕಲ ಗೋಕಲಂ ಗೋಶಾಲೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಿಬಿಎಂಪಿ ನೌಕರರ ಸಾಂಸ್ಕೃತಿಕ ಸಂಘದ ಸದಸ್ಯರಿಗೆ ‘ಕಾಸರಗೋಡು ಪ್ರಶಸ್ತಿ’ ಪ್ರದಾನ ಮಾಡಲಾಗುತ್ತದೆ. ವಿಕಾಸ ಟ್ರಸ್ಟ್‌ ಅಧ್ಯಕ್ಷ ರವಿನಾರಾಯಣ ಗುಣಾಜೆ, ಬಿಬಿಎಂಪಿ ಸಂಘದ ಅಧ್ಯಕ್ಷ ಎ. ಅಮೃತ್ ರಾಜ್, ಕಾಸರಗೋಡು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಿಲ್ಪಾ ದ್ಯಾವಯ್ಯ ಭಾಗವಹಿಸಲಿದ್ದಾರೆ. ಗಡಿಭಾಗದಲ್ಲಿ ನಡೆಯುವ ‘ಕನ್ನಡ ಸ್ಮೇಹ ಮಿಲನ’ ಕಾರ್ಯಕ್ರದಲ್ಲಿ ನೆಲ, ಜಲ, ಭಾಷೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.