ADVERTISEMENT

Photos: ಹೊಂಡಗಳ ಹಾದಿಯಲ್ಲಿ ಬಂಡಿಗೆಲ್ಲಿ ದಾರಿ?

ಬೆಂಗಳೂರು: ಕಣ್ಣು ಹಾಯಿಸಿದಷ್ಟೂ ದೂರ ಹರಡಿರುವ ಕಲ್ಲುಗಳು. ಗುಂಡಿ ಬಿದ್ದ ಜಾಗಗಳಲ್ಲೆಲ್ಲಾ ತುಂಬಿರುವ ಮಳೆ ನೀರು. ಕಾಲಿಟ್ಟಲ್ಲೆಲ್ಲಾ ಕೆಸರು..ಇದ್ಯಾವುದೋ ಕುಗ್ರಾಮದ ಚಿತ್ರಣವಲ್ಲ. ಇದು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ರಸ್ತೆಗಳ ದುಸ್ಥಿತಿ.ಈ ರಸ್ತೆಗಳು ಡಾಂಬರು ಕಾಣದೆ ವರ್ಷಗಳೇ ಉರುಳಿವೆ. ಅಲ್ಲೊ ಇಲ್ಲೊ ಹಾಕಿದ್ದ ಒಂದಷ್ಟು ಡಾಂಬರು ಮಳೆಯ ರಭಸಕ್ಕೆ ಕೊಚ್ಚಿಹೋಗಿವೆ. ಕೆಸರಿನ ರಾಡಿಯ ನಡುವೆ ಸಾಗಲು ಪಾದಚಾರಿಗಳು ಹರಸಾಹಸ ಪಡಬೇಕಿದೆ. ದ್ವಿಚಕ್ರ ವಾಹನ ಸವಾರರೂ ಉಸಿರು ಬಿಗಿ ಹಿಡಿದೇ ಸಾಗಬೇಕಿದೆ. ಆಯಾ ತಪ್ಪಿದರೆ ರಸ್ತೆ ಬದಿಯಲ್ಲೇ ಸೃಷ್ಟಿಯಾಗಿರುವ ಹೊಂಡಗಳಲ್ಲಿ ಬೀಳುವುದು ನಿಶ್ಚಿತ.

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2021, 21:28 IST
Last Updated 12 ಅಕ್ಟೋಬರ್ 2021, 21:28 IST
ಟಿ.ದಾಸರಹಳ್ಳಿ ಸರ್ವಿಸ್ ರಸ್ತೆ – –ಪ್ರಜಾವಾಣಿ ಚಿತ್ರಗಳು/ ಎಂ.ಎಸ್‌.ಮಂಜುನಾಥ್‌.
ಟಿ.ದಾಸರಹಳ್ಳಿ ಸರ್ವಿಸ್ ರಸ್ತೆ – –ಪ್ರಜಾವಾಣಿ ಚಿತ್ರಗಳು/ ಎಂ.ಎಸ್‌.ಮಂಜುನಾಥ್‌.   
ಹೆಸರಘಟ್ಟ ಮುಖ್ಯರಸ್ತೆಯ ವಿಡಿಯಾ ಸ್ಕೂಲ್ ಬಸ್ ನಿಲ್ದಾಣದ ಬಳಿಕ ರಸ್ತೆಯ ಸ್ಥಿತಿ
ಮಲ್ಲಸಂದ್ರ ಮುಖ್ಯ ರಸ್ತೆಯ ಬಾಗಲಗುಂಟೆ ಬಸ್ ನಿಲ್ದಾಣ ಬಳಿಯ ರಸ್ತೆ
ಹೆಸರಘಟ್ಟ ಮುಖ್ಯರಸ್ತೆಯ ತ್ರಿವೇಣಿ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್‌ ಬಳಿಯ ರಸ್ತೆ
ಹೆಸರಘಟ್ಟ ಮುಖ್ಯರಸ್ತೆಯ 8ನೇ ಮೈಲಿ ರಸ್ತೆಯ ಸ್ಥಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.