ADVERTISEMENT

ಐ.ಟಿ. ಲೆಕ್ಕ ಪರಿಶೋಧಕ ಹೆಸರಿನಲ್ಲಿ ₹ 65 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2020, 3:22 IST
Last Updated 23 ಮಾರ್ಚ್ 2020, 3:22 IST

ಬೆಂಗಳೂರು: ‘ಆದಾಯ ತೆರಿಗೆ (ಐ.ಟಿ) ಇಲಾಖೆಯ ಲೆಕ್ಕ ಪರಿಶೋಧಕನೆಂದು ಹೇಳಿದ್ದ ನಾಗೇಶ್ ಶಾಸ್ತ್ರಿ ಎಂಬಾತ, ಆದಾಯ ತೆರಿಗೆ ಪಾವತಿಸುವುದಾಗಿ ಹೇಳಿ ₹ 65 ಲಕ್ಷ ಪಡೆದು ವಂಚಿಸಿ ದ್ದಾನೆ’ ಎಂದು ಆರೋಪಿಸಿ ಉದ್ಯಮಿ ರಕ್ಷಿತ್ ಎಂಬುವರು ಅನ್ನಪೂರ್ಣೇಶ್ವರಿ ನಗರ ಠಾಣೆಗೆ ದೂರು ನೀಡಿದ್ದಾರೆ.

‘ಆದಾಯ ತೆರಿಗೆ ಇಲಾಖೆಯದ್ದು ಎಂದು ನಾಗೇಶ್ ನಕಲಿ ರಶೀದಿ ನೀಡಿದ್ದ. ಠಾಣೆಗೆ ಬಂದ ಮೇಲೆಯೇ ವಂಚನೆ ಹೋಗಿದ್ದು ಕೆ.ಎಚ್‌.ಬಿ ಕಾಲೊನಿ ನಿವಾಸಿ ರಕ್ಷಿತ್‌ ಅವರಿಗೆ ತಿಳಿಯಿತು. ರಕ್ಷಿತ್ ದೂರು ಆಧರಿಸಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT