ADVERTISEMENT

‘ಬಿಎಂಶ್ರೀ ಪ್ರತಿಮೆಯ ದೋಷ ಸರಿಪಡಿಸಿ’

​ಪ್ರಜಾವಾಣಿ ವಾರ್ತೆ
Published 4 ಜನವರಿ 2021, 18:52 IST
Last Updated 4 ಜನವರಿ 2021, 18:52 IST

ಬೆಂಗಳೂರು: ‘ಬಸವನಗುಡಿ ನ್ಯಾಷನಲ್ ಕಾಲೇಜು ವೃತ್ತದಲ್ಲಿರುವ ಬಿ.ಎಂ.ಶ್ರೀ ಪ್ರತಿಮೆಗೆ ಬಣ್ಣ ಹಚ್ಚಿ, ಪ್ರತಿಮೆಸ್ಥಾಪಿಸಿದವರ ಮೂಲ ಹೆಸರುಗಳ ತೆಗೆದು, ತಮ್ಮಹೆಸರು ಹಾಕಿಸಿಕೊಂಡಿರುವಶಾಸಕ ಉದಯ್ ಬಿ.ಗರುಡಾಚಾರ್ ಅವರ ನಡೆಇತಿಹಾಸಕ್ಕೇಅಪಚಾರ’ ಎಂದುಕನ್ನಡ ಗೆಳೆಯರ ಬಳಗ ಖಂಡಿಸಿದೆ.

ಬಳಗದ ಸಂಚಾಲಕ ರಾ.ನಂ.ಚಂದ್ರಶೇಖರ, ‘ಬಿಎಂಶ್ರೀ ಪ್ರತಿಮೆ ಜಾಗ ಸ್ವಚ್ಛಗೊಳಿಸಿ, ಬಯಲು ರಂಗಮಂದಿರ ನಿರ್ಮಿಸುವಂತೆಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಉದಯ್ ಗರುಡಾಚಾರ್ ಹಾಗೂ ಪಾಲಿಕೆ ಆಯುಕ್ತರಿಗೆ ಮನವಿ ಮಾಡಲಾಗಿತ್ತು. ಅದರಂತೆ ಕೆಲವೇ ದಿನಗಳಲ್ಲಿಪ್ರತಿಮೆಗೆ ಸುಂದರಮಂಟಪ ನಿರ್ಮಾಣಗೊಂಡು ಉದ್ಘಾಟನೆಯೂ ಆಗಿದೆ. ಇದಕ್ಕಾಗಿ ವಂದನೆಗಳು. ಆದರೆ,ಮೂಲಕಂಚಿನಪ್ರತಿಮೆಗೆಬಣ್ಣ ಬದಲಿಸುವ ಮೂಲಕ ಅದರ ನೈಜ ಸೌಂದರ್ಯಕ್ಕೆ ಧಕ್ಕೆ ತರಲಾಗಿದ್ದು, ಮೂಲ ಪ್ರತಿಮೆ ಸ್ಥಾಪಿಸಿದವರ ವಿವರಗಳು ಕಾಣದಂತೆ ಬಣ್ಣ ಹಚ್ಚಿರುವುದು ಖಂಡನೀಯ’ ಎಂದು ದೂರಿದ್ದಾರೆ.

‘ಪ್ರತಿಮೆನವೀಕರಣಮತ್ತುಉದ್ಯಾನ‌ದ ಅಭಿವೃದ್ಧಿಎಂದುಹೊಸಕಲ್ಲುಕೆತ್ತಿಸಿ, ಪುತ್ಥಳಿಯಪೀಠದಲ್ಲಿ ಉದಯ್ಗರುಡಾಚಾರ್ಮತ್ತು ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಹಲವರ ಹೆಸರುಗಳನ್ನು ಹಾಕಿಸಿಕೊಂಡಿರುವುದು ಸರಿಯಲ್ಲ. ಈ ಹಿಂದಿನಂತೆಯೇ ವಿವರಗಳಿದ್ದ ಕಲ್ಲುಗಳನ್ನು ಸರಿಪಡಿಸಬೇಕು. 15 ದಿನಗಳಲ್ಲಿ ಇದನ್ನು ಸರಿಪಡಿಸದಿದ್ದರೆ, ಕನ್ನಡಪರ ಸಂಘಟನೆಗಳೊಂದಿಗೆ ಪ್ರತಿಭಟನೆ ನಡೆಸಲಾಗುವುದು’ ಎಂದೂ ಎಚ್ಚರಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.