ADVERTISEMENT

ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ: ರಾಜಭವನ ಸುತ್ತಮುತ್ತ ವಾಹನಗಳ ದಟ್ಟಣೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2021, 8:23 IST
Last Updated 4 ಆಗಸ್ಟ್ 2021, 8:23 IST
ರಾಜಭವನ ರಸ್ತೆಯಲ್ಲಿ ಸಾಲುಗಟ್ಟಿ ನಿಂತಿರುವ ವಾಹನಗಳು
ರಾಜಭವನ ರಸ್ತೆಯಲ್ಲಿ ಸಾಲುಗಟ್ಟಿ ನಿಂತಿರುವ ವಾಹನಗಳು   

ಬೆಂಗಳೂರು: ನೂತನ ಸಚಿವರ ಪ್ರಮಾಣ ವಚನ ಸ್ವೀಕಾರಕ್ಕೆ ರಾಜಭವನದಲ್ಲಿ ತಯಾರಿ ನಡೆಸಲಾಗುತ್ತಿದ್ದು, ಮಧ್ಯಾಹ್ನದಿಂದಲೇ ರಾಜಭವನ ರಸ್ತೆಯಲ್ಲಿ ವಾಹನಗಳ ಓಡಾಟ ಭಾಗಶಃ ಬಂದ್ ಮಾಡಲಾಗಿದೆ. ಇದರಿಂದ ವಿಪರೀತ ದಟ್ಟಣೆ ಉಂಟಾಗುತ್ತದೆ.

ಇಂದು ಸಂಜೆ ಕಾರ್ಯಕ್ರಮವಿದ್ದು, ಬೆಳಿಗ್ಗೆಯಿಂದಲೇ ಪೊಲೀಸರು ರಾಜಭವನ ಸುತ್ತ ಭದ್ರತೆ ಒದಗಿಸಿದ್ದಾರೆ. ಮಾರ್ಗಗಳ ಬದಲಾವಣೆ ಸಹ ಮಾಡುತ್ತಿದ್ದಾರೆ.

ರಾಜಭವನ ಎದುರಿನ ಮುಖ್ಯರಸ್ತೆ, ವಿಧಾನಸೌಧ ಎದುರಿನ ರಸ್ತೆ, ಕಬ್ಬನ ಪಾರ್ಕ್ ರಸ್ತೆ, ಮಿನ್ಸ್ಕ್ ಚೌಕ್ ಹಾಗೂ ಸುತ್ತಮುತ್ತ ವಾಹನಗಳು ಸಾಲುಗಟ್ಟಿ ನಿಂತಿವೆ‌.

ವಾಹನಗಳ ಸಂಚಾರ ತೀರಾ ನಿಧಾನಗತಿಯಲ್ಲಿದ್ದು, ಎರಡು ಆಂಬುಲೆನ್ಸ್‌ಗಳು ಸಹ ದಟ್ಟಣೆಯಲ್ಲಿ ಸಿಲುಕಿಕೊಂಡಿವೆ. ದಟ್ಟಣೆ ನಿಯಂತ್ರಿಸಲು ಪೊಲೀಸರು ಹರಸಾಹಸಪಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.