ಬೆಂಗಳೂರು: ಕೆಎಎಸ್ನ ಕಿರಿಯ ಮತ್ತು ಹಿರಿಯ ಶ್ರೇಣಿಯ 91 ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಇವರನ್ನು ವರ್ಗಾವಣೆ ಮಾಡಲಾಗಿತ್ತು. ಎಸ್.ಎನ್.ಬಾಲಚಂದ್ರ ಅವರನ್ನು ಕೆಪಿಟಿಸಿಎಲ್ ಪ್ರಧಾನ ವ್ಯವಸ್ಥಾಪಕ ಹುದ್ದೆಗೆ ನೇಮಕ ಮಾಡಲಾಗಿದೆ.
ವೆಂಕಟಾಚಲಪತಿ– ಬೆಂಗಳೂರಿನ ಹೆಚ್ಚುವರಿ ಪ್ರಾದೇಶಿಕ ಆಯುಕ್ತ, ವೈ.ವಿ.ಶಾಂತರಾಜು– ಎಸ್ಟೇಟ್ ಅಧಿಕಾರಿ ಬಿಡಿಎ, ಎನ್.ಚಂದ್ರಶೇಖರ್– ಹೆಚ್ಚುವರಿ ನಿರ್ದೇಶಕ, ತೋಟಗಾರಿಕೆ, ಚಿದಾನಂದ ಸದಾಶಿವ– ಜಂಟಿ ನಿರ್ದೇಶಕ, ಪೌರಾಡಳಿತ ಇಲಾಖೆ, ವಿಜಯ ರವಿಕುಮಾರ್– ಉಪ ಆಯುಕ್ತ, ಬಿಎಂಆರ್ಡಿಎ, ಪಿ.ಶಿವರಾಜು– ಕಾರ್ಯದರ್ಶಿ, ಕೆಎಚ್ಬಿ, ಬಿ.ಸದಾಶಿವ ಪ್ರಭು– ಉಪಕಾರ್ಯದರ್ಶಿ, ಕಂದಾಯ ಇಲಾಖೆ, ಬಿ.ಶೋಭಾ– ಹೆಚ್ಚುವರಿ ಆಯುಕ್ತೆ, ಅಬಕಾರಿ ಇಲಾಖೆ, ಸೋಮಶೇಖರ– ಉಪಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ, ಎಸ್.ಸಿ.ಜಗದೀಶ್– ಜಂಟಿ ಆಯುಕ್ತ, ಬಿಬಿಎಂಪಿ (ಮಹಾದೇವಪುರ ವಲಯ), ಸಿ.ಎನ್.ಮಂಜುನಾಥ– ಅಧೀನ ಕಾರ್ಯದರ್ಶಿ, ವಸತಿ ಇಲಾಖೆ, ಕೆ.ಟಿ.ಶಾಂತಲಾ– ಜಂಟಿ ನಿರ್ದೇಶಕಿ, ರೇಷ್ಮೆ ಇಲಾಖೆ– ಸೇರಿ ಒಟ್ಟು 91 ಅಧಿಕಾರಿಗಳ ವರ್ಗ ನಡೆದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.