ADVERTISEMENT

ಕ್ಷೇಮ ಆರೋಗ್ಯ ಧಾಮಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 23 ಮೇ 2022, 2:51 IST
Last Updated 23 ಮೇ 2022, 2:51 IST
ಕ್ಷೇಮ ಆರೋಗ್ಯಧಾಮದ ವಸಂತ್‌ ಗೌಡ ಹಾಗೂ ಅನಸೂಯ ವಸಂತ್‌ ಗೌಡ ಅವರು ರಾಕ್‌ಲೈನ್‌ ವೆಂಕಟೇಶ್‌ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು
ಕ್ಷೇಮ ಆರೋಗ್ಯಧಾಮದ ವಸಂತ್‌ ಗೌಡ ಹಾಗೂ ಅನಸೂಯ ವಸಂತ್‌ ಗೌಡ ಅವರು ರಾಕ್‌ಲೈನ್‌ ವೆಂಕಟೇಶ್‌ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು   

ಬೆಂಗಳೂರು: ಒಂದೇ ಸೂರಿನಡಿ ಹೋಮಿಯೋಪಥಿ, ನ್ಯಾಚುರೋಪಥಿ ಹಾಗೂ ಆಯುರ್ವೇದ ಚಿಕಿತ್ಸೆ ಒದಗಿಸಲು ರಾಜಾಜಿನಗರದ 1ನೇ ಹಂತದಲ್ಲಿ ಆರಂಭಿಸಿರುವ ಕ್ಷೇಮ ಆರೋಗ್ಯಧಾಮಕ್ಕೆ ಅಬಕಾರಿ ಸಚಿವ ಕೆ.ಗೋಪಾಲಯ್ಯ ಭಾನುವಾರ ಚಾಲನೆ ನೀಡಿದರು.

‘ಪ್ರತಿಯೊಬ್ಬರು ಆರೋಗ್ಯಯುತ ಜೀವನ ನಡೆಸಲು ಒತ್ತು ನೀಡಬೇಕು. ಗುಣಮಟ್ಟದ ಚಿಕಿತ್ಸೆ ಒದಗಿಸಲು ಆರೋಗ್ಯಧಾಮ ಆರಂಭಿಸಲಾಗಿದೆ. ಎಲ್ಲಾ ವಯೋಮಾನದ ರೋಗಿಗಳಿಗೂ ಇದರಿಂದ ಅನುಕೂಲವಾಗಲಿದೆ’ ಎಂದು ಗೋಪಾಲಯ್ಯ ತಿಳಿಸಿದರು.

ಚಿತ್ರ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌, ‘ವಸಂತ್‌ ಗೌಡ ಅವರು ಜನರಿಗೆ ಕೈಗೆಟಕುವ ದರದಲ್ಲಿ ಚಿಕಿತ್ಸೆ ಒದಗಿಸುವ ಗುರಿಯೊಂದಿಗೆ ಆರೋಗ್ಯ ಧಾಮ ಆರಂಭಿಸಿದ್ದಾರೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.