ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (ಕೆಎಸ್ಆರ್ಟಿಸಿ) ಸಿದ್ಧಪಡಿಸಿದ ಸಂಚಾರಿ ಸ್ಯಾನಿಟೈಸರ್ಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಚಾಲನೆ ನೀಡಿದರು.
ಕೆಎಸ್ಆರ್ಟಿಸಿ ಸ್ಕ್ರಾಪ್ ಬಸ್ಸನ್ನು ₹ 20 ಸಾವಿರ ವೆಚ್ಚದಲ್ಲಿ ಸಂಚಾರಿ ಸ್ಯಾನಿಟೈಸರ್ ಆಗಿ ಪರಿವರ್ತಿಸಲಾಗಿದೆ.
ಅಗತ್ಯ ಸೇವೆಗಳನ್ನು ಒದಗಿಸುವ ವೈದ್ಯಕೀಯ, ಅರೆವೈದ್ಯಕೀಯ, ಪೊಲೀಸ್, ಪೌರಕಾರ್ಮಿಕರಿಗಾಗಿ ಈ ಸಂಚಾರಿ ಸ್ಯಾನಿಟೈಸರ್ ಕಾರ್ಯನಿರ್ವಹಿಸಲಿದೆ. ಬೆಂಗಳೂರು ನಗರದಾದ್ಯಂತ ಈ ಬಸ್ ಸಂಚರಿಸಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.