ADVERTISEMENT

ಐತಿಹಾಸಿಕ ಬೆಂಗಳೂರು ಕರಗ ಶಕ್ತ್ಯೋತ್ಸವ ರದ್ದು

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2020, 13:00 IST
Last Updated 7 ಏಪ್ರಿಲ್ 2020, 13:00 IST
   

ಬೆಂಗಳೂರು: ನಗರದಲ್ಲಿ ಏ.8 ರಂದು ನಡೆಯಬೇಕಿದ್ದ ಐತಿಹಾಸಿಕ ಕರಗ ಶಕ್ತ್ಯೋತ್ಸವವನ್ನು ರದ್ದುಪಡಿಸಿರುವುದಾಗಿ ಕರಗ ಆಯೋಜನಾ ಸಮಿತಿ ತಿಳಿಸಿದೆ.

ಹೈಕೋರ್ಟ್ ನಿರ್ದೇಶನದ ಮೇರೆಗೆ ಕರಗ ಉತ್ಸವವನ್ನು ರದ್ದು ಪಡಿಸಿದ್ದೇವೆ ಎಂದು ಕರಗ ಆಯೋಜನಾ ಸಮಿತಿಯ ರಾಜಗೋಪಾಲ್ ಪ್ರಜಾವಾಣಿಗೆ ತಿಳಿಸಿದರು.

ಜನ ಸೇರಲು ಅವಕಾಶ ನೀಡದೇ ಕರಗದ ಧಾರ್ಮಿಕ ವಿಧಿಗಳನ್ನು ನಡೆಸಲು ಸಮಿತಿ ಈ ಹಿಂದೆ ತೀರ್ಮಾನಿಸಿತ್ತು. ಈಗ ಅದನ್ನೂ ಕೈಬಿಡಲು ಸಮತಿ ನಿರ್ಧರಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.