ಮಹದೇವಪುರ: ‘ಬೇಸಿಗೆಯಲ್ಲಿ ನೀರಿನ ಕೊರತೆ ಇದೆ. ನಿವಾಸಿಗಳು ನೀರನ್ನುಮಿತವಾಗಿ ಬಳಸಬೇಕು’ ಎಂದು ವರ್ತೂರು ವಾರ್ಡ್ನ ಕಾರ್ಪೊರೇಟರ್ ಪುಷ್ಪಾ ಮಂಜುನಾಥ್ ತಿಳಿಸಿದರು.
ವರ್ತೂರು ಗ್ರಾಮದಲ್ಲಿ ನೂತನ ಕೊಳವೆ ಬಾವಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಹಳೆಯ ಕೊಳವೆ ಬಾವಿಗಳಲ್ಲಿ ನೀರು ಬತ್ತಿದೆ. ಹಾಗಾಗಿ ಹೊಸ ಪಾಯಿಂಟ್ಗಳನ್ನು ಗುರುತಿಸಿ ಪಾಲಿಕೆ ಸದಸ್ಯರ ಅನುದಾನದಲ್ಲಿ ಕೊಳವೆ ಬಾವಿಗಳನ್ನು ಕೊರೆಸಲಾಗುತ್ತಿದೆ. ಇದಕ್ಕೆ ಸ್ಥಳೀಯ ಶಾಸಕರ ಸಹಕಾರವೂ ಇದೆ’ ಎಂದು ಅವರು ಹೇಳಿದರು.
‘ಸದ್ಯಕ್ಕೆ ವರ್ತೂರು, ಗುಂಜೂರು ಮತ್ತು ಮುನ್ನೆಕೊಳ್ಳಾಲಗಳಲ್ಲಿ ಟ್ಯಾಂಕರ್ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ’ ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.