ಬೆಂಗಳೂರು: ಹಣ ತಂದರೆ ಮಾತ್ರ ಗಂಡನ ಜೊತೆ ಸಂಸಾರಕ್ಕೆ ಅವಕಾಶ ನೀಡುವುದಾಗಿ ಅತ್ತೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಯುವತಿಯೊಬ್ಬರು ಅನ್ನಪೂರ್ಣೇಶ್ವರಿ ಬಡಾವಣೆ ಠಾಣೆಗೆ ದೂರು ನೀಡಿದ್ದಾರೆ.
ಯುವತಿಗೆ ಕಳೆದ ವರ್ಷ ಮದುವೆಯಾಗಿದ್ದು, ಗಂಡನೊಂದಿಗೆ ನಾಗರಬಾವಿಯಲ್ಲಿ ನೆಲೆಸಿದ್ದರು. ಇದಾದ ಕೆಲ ದಿನಗಳ ನಂತರ ಕಿರುಕುಳ ನೀಡಲು ಆರಂಭಿಸಿದರು.
’ಕೆಲಸಕ್ಕೆ ಹೋಗಿ ಹಣ ತರಬೇಕು. ಇಲ್ಲದಿದ್ದರೆ ಮಗನೊಂದಿಗೆ ಮಲಗಲು ಬಿಡುವುದಿಲ್ಲ. ಮಕ್ಕಳಾದರೆ ಅದನ್ನು ನಾವೇ ಪೋಷಿಸಬೇಕು‘ ಎಂದು ಹೇಳಿ ಹೀಯಾಳಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೆ. ಪೊಲೀಸರು ರಾಜಿ ನಡೆಸಿದ್ದರು. ಆ ಬಳಿಕ ಕಿರುಕುಳ ನೀಡುವುದು ಜಾಸ್ತಿಯಾಯಿತು‘ ಎಂದು ಯುವತಿ ದೂರಿದ್ದಾರೆ. ಪತಿ, ಅತ್ತೆ ಸೇರಿ ನಾಲ್ವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.