ADVERTISEMENT

ಎನ್‌ಎಚ್‌ಎಐನಿಂದ ಸ್ವಚ್ಛ ಭಾರತ ಅಭಿಯಾನ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2019, 19:29 IST
Last Updated 3 ಅಕ್ಟೋಬರ್ 2019, 19:29 IST
ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದ ಎನ್‌ಎಚ್‌ಎಐ ಸಿಬ್ಬಂದಿ
ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದ ಎನ್‌ಎಚ್‌ಎಐ ಸಿಬ್ಬಂದಿ   

ಬೆಂಗಳೂರು:ಗಾಂಧಿ ಜಯಂತಿ ಅಂಗವಾಗಿ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ವತಿಯಿಂದ ಬುಧವಾರ ಸ್ವಚ್ಛ ಭಾರತ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.

ರಸ್ತೆ ಮತ್ತು ಸಾರ್ವಜನಿಕ ಸ್ಥಳದಲ್ಲಿ ಬಿದ್ದಿದ್ದ ಕಸ ಸಂಗ್ರಹಿಸಿದ ಸಿಬ್ಬಂದಿ ಅದನ್ನು ವಿಲೇವಾರಿ ಮಾಡಿದರು. ಪ್ಲಾಸ್ಟಿಕ್‌ ಬಳಕೆಯಿಂದಾಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಿದರು.

ಶುಲ್ಕ ಸಂಗ್ರಹ ಕೇಂದ್ರಗಳ ಬಳಿಯ ಪ್ಲಾಸ್ಟಿಕ್‌ ಸಂಗ್ರಹಿಸಿದರು. ಪ್ಲಾಸ್ಟಿಕ್‌ ಕರಗಿಸಿ, ಕಾಂಕ್ರೀಟ್‌ನಂತೆ ರಸ್ತೆ ನಿರ್ಮಾಣಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಸಾರ್ವಜನಿಕರಿಗೆ ತಿಳಿಸಿದರು.

ADVERTISEMENT

‘ಸ್ವಚ್ಛತೆಯೇ ಸೇವೆ’ ಎಂಬ ಸಾಲುಗಳಿದ್ದ ಭಿತ್ತಿಪತ್ರಗಳನ್ನು ಸಿಬ್ಬಂದಿ ಪ್ರದರ್ಶಿಸಿದರು. ಪ್ರಾಧಿಕಾರದ ವಿವಿಧ ಕಚೇರಿಗಳ ಸಿಬ್ಬಂದಿ ಅಭಿಯಾನದಲ್ಲಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.