ADVERTISEMENT

‘ವಿದ್ಯಾರ್ಥಿಗಳು ಓದಿನಷ್ಟೇ ಕ್ರೀಡೆಗೂ ಪ್ರಾಧಾನ್ಯತೆ ನೀಡಬೇಕು’

​ಪ್ರಜಾವಾಣಿ ವಾರ್ತೆ
Published 10 ಮೇ 2022, 20:07 IST
Last Updated 10 ಮೇ 2022, 20:07 IST
ಎಂ.ಆರ್‌.ದೊರೆಸ್ವಾಮಿ ಅವರು ‘ಸ್ಪರ್ಧಾ’ ವಾರ್ಷಿಕ ಕ್ರೀಡಾ ನಿಯತಕಾಲಿಕೆ ಬಿಡುಗಡೆ ಮಾಡಿದರು. (ಎಡದಿಂದ) ಕುಲಸಚಿವ ಕೆ.ಎಸ್‌.ಶ್ರೀಧರ್‌, ಉಪಕುಲಪತಿ ಜೆ.ಸೂರ್ಯಪ್ರಸಾದ್‌, ಕೆ.ಸಂತೋಷ್ ಬಾಬು, ಜೂಡ್‌ ಫೆಲಿಕ್ಸ್‌ ಹಾಗೂ ಕ್ರೀಡಾ ನಿರ್ದೇಶಕ ಎಂ.ಎಸ್‌.ವಿನಯ್‌ ಇದ್ದರು
ಎಂ.ಆರ್‌.ದೊರೆಸ್ವಾಮಿ ಅವರು ‘ಸ್ಪರ್ಧಾ’ ವಾರ್ಷಿಕ ಕ್ರೀಡಾ ನಿಯತಕಾಲಿಕೆ ಬಿಡುಗಡೆ ಮಾಡಿದರು. (ಎಡದಿಂದ) ಕುಲಸಚಿವ ಕೆ.ಎಸ್‌.ಶ್ರೀಧರ್‌, ಉಪಕುಲಪತಿ ಜೆ.ಸೂರ್ಯಪ್ರಸಾದ್‌, ಕೆ.ಸಂತೋಷ್ ಬಾಬು, ಜೂಡ್‌ ಫೆಲಿಕ್ಸ್‌ ಹಾಗೂ ಕ್ರೀಡಾ ನಿರ್ದೇಶಕ ಎಂ.ಎಸ್‌.ವಿನಯ್‌ ಇದ್ದರು   

ಬೆಂಗಳೂರು: ‘ಕಬಡ್ಡಿ ಮತ್ತು ಕೊಕ್ಕೊ, ಗ್ರಾಮೀಣ ಕ್ರೀಡೆಗಳು. ಇವುಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ವ್ಯಾಸಂಗದ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲೂ ಪಾಲ್ಗೊಳ್ಳುವಂತೆ ಪ್ರಾಧ್ಯಾಪಕರು ವಿದ್ಯಾರ್ಥಿಗಳನ್ನು ಉತ್ತೇಜಿಸಬೇಕು. ಓದಿನಷ್ಟೇ ಕ್ರೀಡೆಗೂ ಪ್ರಾಧಾನ್ಯತೆ ನೀಡಿದರೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಸಾಧ್ಯ’ ಎಂದು ಪಿಇಎಸ್‌ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ.ಎಂ.ಆರ್‌.ದೊರೆಸ್ವಾಮಿ ತಿಳಿಸಿದರು.

ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ಮತ್ತು ಕ್ರೀಡಾ ನಿರ್ವಹಣೆ ವಿಭಾಗವು ಹಮ್ಮಿಕೊಂಡಿದ್ದ ‘ಕ್ಯಾಂಪಸ್‌ ಚಾಲೆಂಜ್‌’ ಅಂತರ ವಿಭಾಗೀಯ ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ವಿತರಿಸಿ ಮಂಗಳವಾರ ಮಾತನಾಡಿದರು.

ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಸಂತೋಷ್ ಬಾಬು ಹಾಗೂ ಅಂತರರಾಷ್ಟ್ರೀಯ ಹಾಕಿ ಆಟಗಾರ ಜೂಡ್‌ ಫೆಲಿಕ್ಸ್‌ ಮಾತನಾಡಿದರು. 8 ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿಜೇತರಾದ 17 ವಿದ್ಯಾರ್ಥಿಗಳಿಗೆ ಪದಕ ಹಾಗೂ ಪ್ರಮಾಣಪತ್ರ ವಿತರಿಸಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.