ADVERTISEMENT

ಬೆಂಗಳೂರಿನಲ್ಲಿ ತಂಪೆರೆದ ಮಳೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2019, 20:40 IST
Last Updated 4 ಜುಲೈ 2019, 20:40 IST
ಪುರಭವನ ಎದುರು ಸುರಿವ ಮಳೆಯಲ್ಲೇ ಹೂವಿನ ವ್ಯಾಪಾರಿಯೊಬ್ಬರು ಗಾಡಿಯನ್ನು ತಳ್ಳಿಕೊಂಡು ಹೋದರು – ಪ್ರಜಾವಾಣಿ ಚಿತ್ರ
ಪುರಭವನ ಎದುರು ಸುರಿವ ಮಳೆಯಲ್ಲೇ ಹೂವಿನ ವ್ಯಾಪಾರಿಯೊಬ್ಬರು ಗಾಡಿಯನ್ನು ತಳ್ಳಿಕೊಂಡು ಹೋದರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ನಗರದ ಹಲವೆಡೆ ಗುರುವಾರ ಜಿಟಿ ಜಿಟಿ ಮಳೆಯಾಗಿ ತಂಪೆರೆಯಿತು.

ಬೆಳಿಗ್ಗೆಯಿಂದ ನಗರದಲ್ಲಿ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನ ಕೆಲ ನಿಮಿಷ ಬಿಸಿಲು ಇತ್ತು. ನಂತರ, ಪುನಃ ಮೋಡ ಕವಿದು ಜಿಟಿ ಜಿಟಿ ಮಳೆ ಬರಲಾರಂಭಿಸಿತು.

ರಾಜಾಜಿನಗರ, ಮಲ್ಲೇಶ್ವರ, ವಿಜಯನಗರ, ಯಶವಂತಪುರ, ಪೀಣ್ಯ, ಇಂದಿರಾನಗರ, ಹೂಡಿ, ಮಾರತ್ತಹಳ್ಳಿ, ವೈಟ್‌ಫೀಲ್ಡ್, ಕೋರಮಂಗಲ, ಮಡಿವಾಳ, ಬೊಮ್ಮನಹಳ್ಳಿ, ಜಯನಗರ, ಎಚ್‌ಎಸ್‌ಆರ್‌ ಲೇಔಟ್, ಎಲೆಕ್ಟ್ರಾನಿಕ್ ಸಿಟಿ, ಬನಶಂಕರಿ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಮಳೆಯಾಯಿತು.

ADVERTISEMENT

ಅಂಥ ಮಳೆಯಲ್ಲೇ ಸವಾರರು ವಾಹನಗಳನ್ನು ಓಡಿಸಿಕೊಂಡು ಹೋದರು. ಕೆಲ ಪಾದಚಾರಿಗಳು ಮಳೆಯಲ್ಲಿ ನಡೆದುಕೊಂಡು ಹೋದರು. ಮಲ್ಲೇಶ್ವರ, ಓಕಳಿಪುರ, ಮೈಸೂರು ರಸ್ತೆ ಹಾಗೂ ತುಮಕೂರು ರಸ್ತೆಯಲ್ಲಿ ಸಂಚಾರ ದಟ್ಟಣೆ ಕಂಡುಬಂತು.

‘ಹೇಳಿಕೊಳ್ಳುವಂಥ ಮಳೆ ಸುರಿದಿಲ್ಲ. ಎಲ್ಲಿಯೂ ಹಾನಿ ಆದ ಬಗ್ಗೆ ದೂರುಗಳು ಬಂದಿಲ್ಲ’ ಎಂದು ಬಿಬಿಎಂಪಿ ಸಹಾಯವಾಣಿ ಸಿಬ್ಬಂದಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.