ADVERTISEMENT

ರೇಣುಕಸ್ವಾಮಿ ಕೊಲೆ: ದರ್ಶನ್, ಪವಿತ್ರಾಗೌಡ ವಿಚಾರಣೆ ಡಿ.29ಕ್ಕೆ ಮಂದೂಡಿಕೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2025, 15:59 IST
Last Updated 18 ಡಿಸೆಂಬರ್ 2025, 15:59 IST
ರೇಣುಕಸ್ವಾಮಿ 
ರೇಣುಕಸ್ವಾಮಿ    

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಮುಂದಿನ ವಿಚಾರಣೆಯನ್ನು ಡಿ.29ಕ್ಕೆ ಮುಂದೂಡಿ 57ನೇ ಎಸಿಎಂಎಂ ನ್ಯಾಯಾಲಯ ಗುರುವಾರ ಆದೇಶಿಸಿದೆ.

ಗುರುವಾರ ನಡೆದ ವಿಚಾರಣೆಗೆ ನಟ ದರ್ಶನ್‌, ಪವಿತ್ರಾಗೌಡ ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದರು.

ರೇಣುಕಸ್ವಾಮಿ ತಾಯಿ ರತ್ನಪ್ರಭಾ ಹಾಗೂ ತಂದೆ ಕಾಶೀನಾಥಯ್ಯ ಅವರನ್ನು ದರ್ಶನ್‌ ಪರ ವಕೀಲರನ್ನು ಹೊರತುಪಡಿಸಿ ಉಳಿದ ಆರೋಪಿಗಳ ವಕೀಲರು ಪಾಟಿ ಸವಾಲಿಗೆ ಒಳಪಡಿಸಿದರು. ನಂತರ, ರೇಣುಕಸ್ವಾಮಿ ತಂದೆಯನ್ನು ಪವಿತ್ರಾ ಪರ ವಕೀಲ ಬಾಲನ್‌ ಅವರು ಪಾಟಿ ಸವಾಲಿಗೆ ಒಳಪಡಿಸಿದರು. ರೇಣುಕಸ್ವಾಮಿ ಪೋಷಕರು ಬುಧವಾರ ನೀಡಿದ್ದ ಹೇಳಿಕೆಯ ಅಂಶಗಳನ್ನೇ ಗುರುವಾರ ಪುನರುಚ್ಚರಿಸಿದರು. ಬಳಿಕ ವಿಚಾರಣೆ ಮುಂದೂಡಲಾಯಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.