ADVERTISEMENT

‘ಕಂದಾಯ ಅಧಿಕಾರಿಗಳನ್ನು ಪಾಕಿಸ್ತಾನಕ್ಕೆ ಕಳಿಸಿ’

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2020, 20:16 IST
Last Updated 3 ಮಾರ್ಚ್ 2020, 20:16 IST
.
.   

ಬೆಂಗಳೂರು: ‘ನಮ್ಮ ಕಂದಾಯ ಅಧಿಕಾರಿಗಳನ್ನು ಪಾಕಿಸ್ತಾನಕ್ಕೆ ಕಳುಹಿಸಿಕೊಟ್ಟರೆ ನಮಗೆ ಸೈನ್ಯದ ಅವಶ್ಯಕತೆಯೇ ಇರುವುದಿಲ್ಲ...!’

ಪ್ರಕರಣವೊಂದರ ವಿಚಾರಣೆ ವೇಳೆ ಮಂಗಳವಾರ ಕಂದಾಯ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ನ್ಯಾಯ ಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠ ವ್ಯಕ್ತಪಡಿಸಿದ ಮೌಖಿಕ ಅಭಿಪ್ರಾಯವಿದು.

‘ದೇಶಕ್ಕೆ ಸ್ವಾತಂತ್ರ್ಯ ಬಂದು 73 ವರ್ಷ ಕಳೆದರೂ ನಮ್ಮ ವ್ಯವಸ್ಥೆ ಇನ್ನೂ ಸರಿ ಹೋಗಿಲ್ಲ’ ಎಂದು ವಿಷಾದಿಸಿದ ನ್ಯಾಯಮೂರ್ತಿಗಳು, ‘ನಮ್ಮ ಕಂದಾಯ ಅಧಿಕಾರಿಗಳು ದಾಖಲೆಗಳನ್ನು ಹೇಗೆ ಬೇಕಾದರೂ ಹಾಗೆ ಮಗ್ಗಲು ಬದಲಿಸುವಂತೆ ಮಾಡಬಲ್ಲ ನಿಷ್ಣಾತರು’ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

‘ಹದಗೆಟ್ಟಿರುವ ಈ ವ್ಯವಸ್ಥೆ ಸರಿಪಡಿಸಲು ವಕೀಲರು, ಮಂತ್ರಿಗಳು ಮತ್ತು ನ್ಯಾಯಾಂಗ ಅಧಿಕಾರಿಗಳೂ ಸೇರಿದಂತೆ ಎಲ್ಲರೂ ತಮ್ಮ ಆರೋಗ್ಯವನ್ನು ಪಣಕ್ಕೆ ಇಟ್ಟಾದರೂ ಸರಿಯೆ ಕೈ ಜೋಡಿಸಿ ಕೆಲಸ ಮಾಡಬೇಕಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.