ಪೀಣ್ಯ ದಾಸರಹಳ್ಳಿ: ಬಾಗಲಗುಂಟೆಯ ರಂಗಮಂದಿರದಲ್ಲಿ 21 ರಂದು ಸ್ನೇಹಜೀವಿ ಗೆಳೆಯರ ಬಳಗ ಸಾಹಿತ್ಯಿಕ ಘಟಕ ವತಿಯಿಂದ ಸಂಕ್ರಾಂತಿ ಸಂಭ್ರಮ- 2024 ಜರುಗಲಿದೆ.
ಹಿರಿಯ ಕಲಾವಿದ ಬಿ.ಆರ್. ಶ್ರೀನಿವಾಸಮೂರ್ತಿ ಕಾರ್ಯಕ್ರಮದ ಸರ್ವಾಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಎಸ್. ಮುನಿರಾಜು ಉದ್ಘಾಟಿಸಲಿದ್ದಾರೆ. ಬೆಂಗಳೂರು ನಗರ ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪ್ರಕಾಶ್ ಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಸ್ವಾಭಿಮಾನಿ ಕರ್ನಾಟಕ ವೇದಿಕೆಯ ಅಧ್ಯಕ್ಷ ದ್ವಾರನಕುಂಟೆ ಪಾತಣ್ಣ ಆಗಮಿಸಲಿದ್ದಾರೆ.
‘ಬೆಳಿಗ್ಗೆ 10ಕ್ಕೆ ಬಾಗಲಗುಂಟೆ ಬಸ್ ನಿಲ್ದಾಣದಿಂದ ರಂಗಮಂದಿರದವರೆಗೂ ಕಲಾತಂಡಗಳೊಂದಿಗೆ ಭುವನೇಶ್ವರಿ ಭಾವಚಿತ್ರದ ಮೆರವಣಿಗೆ ನಡೆಯಲಿದೆ. ರಾಜ್ಯಮಟ್ಟದ ಕವಿಗೋಷ್ಠಿ ಹಾಗೂ ‘ಸ್ನೇಹ ಜೀವಿ ರತ್ನ ಪ್ರಶಸ್ತಿ' ಪ್ರದಾನ, ಗೀತ ಗಾಯನ, ಪುಸ್ತಕ ಲೋಕಾರ್ಪಣೆ, ನೃತ್ಯಪ್ರದರ್ಶನ ನೆಡೆಯಲಿವೆ' ಎಂದು ಸ್ನೇಹಜೀವಿ ಗೆಳೆಯರ ಬಳಗದ ಸಂಸ್ಥಾಪಕ ಅಧ್ಯಕ್ಷ ಶಶಿಕಾಂತ್ ರಾವ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.