ADVERTISEMENT

ಲೆಕ್ಕ ಪರಿಶೋಧಕರ ಸಂಘಕ್ಕೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2021, 16:58 IST
Last Updated 2 ಸೆಪ್ಟೆಂಬರ್ 2021, 16:58 IST
ಚಂದನ ಕುಮಾರ್ 
ಚಂದನ ಕುಮಾರ್    

ಬೆಂಗಳೂರು: ರಾಜ್ಯ ಸನ್ನದು ಲೆಕ್ಕ ಪರಿಶೋಧಕರ ಸಂಘದ ನೂತನ ಅಧ್ಯಕ್ಷರಾಗಿ ಚಂದನ ಕುಮಾರ ಹೆಗ್ಡೆ ಆಯ್ಕೆಯಾಗಿದ್ದಾರೆ.

ನಗರದಲ್ಲಿ ಇತ್ತೀಚೆಗೆ ನಡೆದ ಸಂಘದ 47ನೇ ವಾರ್ಷಿಕ ಸಭೆಯಲ್ಲಿ 2021–22ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಸಂಘದ ಉಪಾಧ್ಯಕ್ಷರಾಗಿ ಪ್ರಮೋದ ಶ್ರೀಹರಿ, ಕಾರ್ಯದರ್ಶಿಯಾಗಿ ಜಿ. ಸುಜಾತಾ, ಜಂಟಿ ಕಾರ್ಯದರ್ಶಿಯಾಗಿ ಶಿವಪ್ರಕಾಶ ವಿರಕ್ತಮಠ, ಖಜಾಂಚಿಯಾಗಿ ಎಂ. ವಿಜಯಕುಮಾರ್ ಪಟೇಲ ಆಯ್ಕೆಯಾದರು ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.