ಬೆಂಗಳೂರು: ‘ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಬಹಳ ಸಲ ದೂರವಾಣಿ ಕರೆ ಮಾಡಿದ್ದಾರೆ. ಅವರ ಅಂತರಾಳದಲ್ಲಿ ಏನಿದೆಯೊ ನನಗಂತೂ ಗೊತ್ತಿಲ್ಲ’ ಎಂದು ಪೌರಾಡಳಿತ ಸಚಿವ ಎಂ.ಟಿ.ಬಿ.ನಾಗರಾಜು ಹೇಳಿದ್ದಾರೆ.
‘ಅವರು ಆಗಿಂದ್ದಾಗ್ಗೆ ಫೋನ್ ಮಾಡುತ್ತಾರೆ. ಸೋಮವಾರವೂ ಬಾದಾಮಿಯಿಂದ ಕರೆ ಮಾಡಿದ್ದರು. ದೇವರ ಮೇಲೆ ಸತ್ಯ ಮಾಡಿ ಹೇಳುತ್ತೇನೆ ಅವರು ರಾಜಕೀಯವಾಗಿ ಒಂದು ಸಲವೂ ಮಾತನಾಡಿಲ್ಲ’ ಎಂದು ಅವರು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
‘ನನ್ನ ಬಳಿ ಯಾರೂ ಕೂಡ ಪಕ್ಷ ಬಿಡುವ ವಿಚಾರ ಹೇಳಿಲ್ಲ. ನಾನು ಹೋಗುವುದಾದರೆ ರಾಜಕೀಯ ಬಿಟ್ಟು ಮನೆಗೆ ಹೋಗುತ್ತೇನೆಯೇ ಹೊರತು ಬೇರೆ ಪಕ್ಷಕ್ಕೆ ಹೋಗುವುದಿಲ್ಲ. ಪ್ರತಿ ಚುನಾವಣೆಗೂ ಪಕ್ಷ ಬದಲು ಮಾಡಲು ಆಗುವುದಿಲ್ಲ. ಜನಸೇವೆ ಮಾಡುವುದಕ್ಕೆ ಬಂದಿದ್ದೇನೆಹೊರತು ಅಧಿಕಾರಕ್ಕಲ್ಲ. ನಾನು ಯಾವುದಕ್ಕೂ ಆಸೆ ಪಡುವವನಲ್ಲ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.