ADVERTISEMENT

₹ 3 ಲಕ್ಷ ಮೌಲ್ಯದ ಬೆಳ್ಳಿ ಕಳವು: ಬಂಧನ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2021, 2:05 IST
Last Updated 19 ಫೆಬ್ರುವರಿ 2021, 2:05 IST
ಪೊಲೀಸರು ಜಪ್ತಿ ಮಾಡಿದ ಬೆಳ್ಳಿ ವಸ್ತುಗಳು
ಪೊಲೀಸರು ಜಪ್ತಿ ಮಾಡಿದ ಬೆಳ್ಳಿ ವಸ್ತುಗಳು   

ಬೆಂಗಳೂರು: ಬ್ಯಾಡರಹಳ್ಳಿ ಬಳಿಯ ಕಾಳಿಕಾನಗರದಲ್ಲಿರುವ ಮಳಿಗೆಯೊಂದರಲ್ಲಿ ಬೆಳ್ಳಿ ವಸ್ತುಗಳನ್ನು ಕಳವು ಮಾಡಿದ್ದ ಆರೋಪದಡಿ, ಅದೇ ಮಳಿಗೆಯ ಕೆಲಸಗಾರ ಚೇತನ್ (26) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

‘ರಾಮನಗರ ಜಿಲ್ಲೆಯ ಸುಗ್ಗನಹಳ್ಳಿಯ ಚೇತನ್, ಎರಡೂವರೆ ತಿಂಗಳಿನಿಂದ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ. ಆತನಿಂದ ₹ 3 ಲಕ್ಷ ಮೌಲ್ಯದ ಚಿನ್ನದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಮಳಿಗೆ ಮಾಲೀಕರು ಕೆಲಸ ನಿಮಿತ್ತ ಊರಿಗೆ ಹೋಗಿದ್ದರು. ಚೇತನ್ ಮಾತ್ರ ಅಂಗಡಿಯಲ್ಲಿದ್ದ. ಎರಡು ದಿನ ಬಿಟ್ಟು ಮಾಲೀಕರು ಅಂಗಡಿಗೆ ಬರುವಷ್ಟರಲ್ಲೇ ಆರೋಪಿ ಚಿನ್ನದ ವಸ್ತುಗಳನ್ನು ಕದ್ದುಕೊಂಡು ಪರಾರಿಯಾಗಿದ್ದ’ ಎಂದೂ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.