ADVERTISEMENT

‘ಕ್ರೀಡಾಸಕ್ತಿಯಿಂದ ದೇಹ ಸದೃಢ’

​ಪ್ರಜಾವಾಣಿ ವಾರ್ತೆ
Published 26 ಜೂನ್ 2018, 19:47 IST
Last Updated 26 ಜೂನ್ 2018, 19:47 IST
ಕ್ರೀಡಾಸ್ಫರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್ ಬಹುಮಾನ ವಿತರಿಸಿದರು. ಕುಲಸಚಿವ ಶಿವರಾಜು ಮತ್ತು ಬಿ.ಕೆ.ರವಿ ಇದ್ದಾರೆ
ಕ್ರೀಡಾಸ್ಫರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್ ಬಹುಮಾನ ವಿತರಿಸಿದರು. ಕುಲಸಚಿವ ಶಿವರಾಜು ಮತ್ತು ಬಿ.ಕೆ.ರವಿ ಇದ್ದಾರೆ   

ಬೆಂಗಳೂರು: ‘ಕ್ರೀಡಾಸಕ್ತಿಯಿಂದ ದೈಹಿಕವಾಗಿ ಸದೃಢರಾಗಬಹುದು. ಇದರಿಂದ ಮಾನಸಿಕ ಸ್ವಾಸ್ಥ್ಯಕೂಡ ಹೆಚ್ಚುತ್ತದೆ’ ಎಂದು ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಕೆ.ಆರ್. ವೇಣುಗೋಪಾಲ್ ಹೇಳಿದರು.

ಬೆಂಗಳೂರು ವಿ.ವಿಯಲ್ಲಿ ಆಯೋಜಿಸಿದ್ದ ಅಂತರವಿಭಾಗೀಯ ಮಟ್ಟದ ಕ್ರೀಡಾಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

ಗ್ರಾಮೀಣಾಭಿವೃದ್ಧಿ ವಿಭಾಗದ ವಿದ್ಯಾರ್ಥಿಗಳು ಶ್ರೇಷ್ಠ ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡರು. ಶ್ರೇಷ್ಠ ಕ್ರೀಡಾಪಟು ಪ್ರಶಸ್ತಿಯನ್ನು ಇತಿಹಾಸ ವಿಭಾಗದ ಸುರೇಶ್ ಗೆದ್ದುಕೊಂಡರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.