ADVERTISEMENT

ಜುಲೈ 4ಕ್ಕೆ ಎಸ್‌ಎಸ್‌ಎಫ್ ಸೌಹಾರ್ದ ನಡಿಗೆ ಸಮಾರೋಪ

​ಪ್ರಜಾವಾಣಿ ವಾರ್ತೆ
Published 2 ಜುಲೈ 2025, 15:36 IST
Last Updated 2 ಜುಲೈ 2025, 15:36 IST
<div class="paragraphs"><p>ಎಸ್‌ಎಸ್‌ಎಫ್&nbsp;ಸೌಹಾರ್ದ ನಡಿಗೆ</p></div>

ಎಸ್‌ಎಸ್‌ಎಫ್ ಸೌಹಾರ್ದ ನಡಿಗೆ

   

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಕೋಮುವಾದಕ್ಕೆ ಕಡಿವಾಣ ಹಾಕಲು, ಎಸ್‌ಎಸ್‌ಎಫ್ ಕರ್ನಾಟಕವು ‘ಮನಸ್ಸು ಮನಸ್ಸುಗಳನ್ನು ಪೋಣಿಸುವ’ ಘೋಷವಾಕ್ಯದೊಂದಿಗೆ ಹಮ್ಮಿಕೊಂಡಿರುವ ‘ಸೌಹಾರ್ದ ನಡಿಗೆ’ಯ ಸಮಾರೋಪ ಕಾರ್ಯಕ್ರಮ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಜುಲೈ 4ರಂದು ನಡೆಯಲಿದೆ.

ರಾಜ್ಯದ 20 ಪಟ್ಟಣಗಳಲ್ಲಿ ಸೌಹಾರ್ದ ನಡಿಗೆ ನಡೆದಿತ್ತು. ಸಮಾರೋಪದಲ್ಲಿ ವಿಧಾನ ಸಭಾ ಅಧ್ಯಕ್ಷ ಯು.ಟಿ. ಖಾದರ್, ಬೇಲಿ ಮಠದ ಶಿವರುದ್ರ ಸ್ವಾಮೀಜಿ, ಧಮ್ಮವೀರ ಭಂತೆ, ಸೇಂಟ್ ಜೋಸೆಫ್ ಇಂಡಿಯನ್ ಸ್ಕೂಲ್ ಪ್ರಾಂಶುಪಾಲ ಧರ್ಮಗುರು ಸಿರಿಲ್ ಮೆನೆಜಸ್ ಎಸ್.ಜೆ, ರಾಜ್ಯ ಯುವಜನ ಸಂಘದ ಅಧ್ಯಕ್ಷ ಬಶೀರ್ ಸ‌ಅ‌ದಿ ಪೀಣ್ಯ, ಎಸ್ಸೆಸ್ಸೆಫ್ ರಾಜ್ಯಧ್ಯಕ್ಷ ಸುಫಿಯಾನ್ ಸಖಾಫಿ, ಎಸ್.ವೈ.ಎಸ್, ರಾಜ್ಯ ಸಾಂತ್ವನ ಅಧ್ಯಕ್ಷ ಇಬ್ರಾಹಿಂ ಸಖಾಫಿ ಪಯೋಟ, ಸ್ವಾಗತ ಸಮಿತಿ ಚೇರ್ಮಾನ್ ಸ್ವಾಲಿಹ್ ಟಿ.ಸಿ. ಭಾಗವಹಿಸಲಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.