ಬೆಂಗಳೂರು: ಹೆಣ್ಣೂರು ಸಮೀಪದ ಗೆದ್ದಲಹಳ್ಳಿಯಲ್ಲಿ ಬುಧವಾರ ಮಧ್ಯಾಹ್ನ ರೈಲ್ವೆ ಹಳಿ ಮೇಲೆ ಮೈಕೆಲ್ (25) ಎಂಬ ನೈಜೀರಿಯಾ ಪ್ರಜೆಯ ಶವ ಪತ್ತೆಯಾಗಿದೆ. ಮೈಕೆಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೋ, ಹಳಿ ದಾಟುವ ಧಾವಂತದಲ್ಲಿ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೋ ಗೊತ್ತಿಲ್ಲ.]
ರುಂಡ–ಮುಂಡ ಬೇರ್ಪಟ್ಟಿದ್ದು, ಅವರ ಸ್ನೇಹಿತರು ಶವವನ್ನು ಗುರುತಿಸಿದ್ದಾರೆ ಎಂದು ಬೈಯಪ್ಪನಹಳ್ಳಿ ರೈಲ್ವೆ ಪೊಲೀಸರು ಹೇಳಿದರು.
‘ಮೂರು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ ಮೈಕೆಲ್, ವೀಸಾ ಅವಧಿ ಮುಗಿದರೂ ಹಿಂದಿರುಗಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.