ADVERTISEMENT

ಪತ್ರಕರ್ತ ಪದ್ಮರಾಜ ದಂಡಾವತಿಗೆ ‘ಸುಮಾ ವಸಂತ ಪ್ರಶಸ್ತಿ’

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2025, 14:53 IST
Last Updated 3 ಅಕ್ಟೋಬರ್ 2025, 14:53 IST
ಪದ್ಮರಾಜ ದಂಡಾವತಿ
ಪದ್ಮರಾಜ ದಂಡಾವತಿ   

ಬೆಂಗಳೂರು: ಸಾಲಿಗ್ರಾಮ ಜೈನ ಮಿತ್ರ ಮಂಡಳಿ ನೀಡುವ ‘ಸುಮಾ ವಸಂತ ಪ್ರಶಸ್ತಿ’ಗೆ ಪತ್ರಕರ್ತ ಪದ್ಮರಾಜ ದಂಡಾವತಿ ಹಾಗೂ ‘ಶ್ರೇಯೋಭದ್ರ ಪ್ರಶಸ್ತಿ’ಗೆ ಕಲಾವಿದ ಚಿತ್ತ ಜಿನೇಂದ್ರ ಆಯ್ಕೆಯಾಗಿದ್ದಾರೆ. 

ಸಾಹಿತ್ಯ ಕ್ಷೇತ್ರದಲ್ಲಿ ಗಮನಾರ್ಹ ಸೇವೆ ಸಲ್ಲಿಸಿದವರಿಗೆ ‘ಸುಮಾ ವಸಂತ ಪ್ರಶಸ್ತಿ’ ಹಾಗೂ ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿದವರಿಗೆ ‘ಶ್ರೇಯೋಭದ್ರ ಪ್ರಶಸ್ತಿ’ ನೀಡಲಾಗುತ್ತಿದೆ. ಈ ಪ್ರಶಸ್ತಿಗಳು ₹10 ಸಾವಿರ ನಗದು ಹಾಗೂ ಸ್ಮರಣಿಕೆ ಒಳಗೊಂಡಿವೆ. 

ಇದೇ 5ರಂದು ಮಂಡಳಿಯ ವಾರ್ಷಿಕೋತ್ಸವ ಆಚರಿಸಲಾಗುತ್ತಿದ್ದು, ಈ ವೇಳೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ ಎಂದು ಮಂಡಳಿಯ ಕಾರ್ಯದರ್ಶಿ ಪದ್ಮಿನಿ ನಾಗರಾಜು ತಿಳಿಸಿದ್ದಾರೆ.

ADVERTISEMENT
ಚಿತ್ತ ಜಿನೇಂದ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.