ADVERTISEMENT

ರಂಗಭೂಮಿ‌ ನಿರ್ದೇಶಕ ಎಚ್.ವಿ. ವೆಂಕಟಸುಬ್ಬಯ್ಯ ನಿಧನ 

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2022, 7:26 IST
Last Updated 12 ಸೆಪ್ಟೆಂಬರ್ 2022, 7:26 IST
ಎಚ್.ವಿ. ವೆಂಕಟಸುಬ್ಬಯ್ಯ
ಎಚ್.ವಿ. ವೆಂಕಟಸುಬ್ಬಯ್ಯ    

ಬೆಂಗಳೂರು: ಕನ್ನಡದ ರಂಗಭೂಮಿ ನಿರ್ದೇಶಕ ಹಾಗೂ ಶ್ರೀರಂಗರ ಒಡನಾಡಿ ಆಗಿದ್ದ ಎಚ್.ವಿ. ವೆಂಕಟಸುಬ್ಬಯ್ಯ (85) ಅವರು ಸೋಮವಾರ ಬೆಳಿಗ್ಗೆ ನಿಧನ ಹೊಂದಿದರು.

ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಶೇಷಾದ್ರಿಪುರದ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ವೃತ್ತಿಯಲ್ಲಿ ಎಲೆಕ್ಟ್ರಾನಿಕ್ ಎಂಜಿನಿಯರ್ ಆಗಿದ್ದ ವೆಂಕಟಸುಬ್ಬಯ್ಯ ರಂಗಭೂಮಿಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ಇವರ ಸಾಧನೆಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ,ರಾಜ್ಯೋತ್ಸವ ಪ್ರಶಸ್ತಿ ಹಾಗೂ ಬಿ.ವಿ. ಕಾರಂತ್ ಪ್ರಶಸ್ತಿಗಳು ಲಭಿಸಿದ್ದವು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.