ADVERTISEMENT

‘ಶ್ರೀಮಂತ’ನಾಗಿ ಓಡಾಡಲು ಕಳ್ಳತನ ಮಾಡುತ್ತಿದ್ದ

​ಪ್ರಜಾವಾಣಿ ವಾರ್ತೆ
Published 5 ಜೂನ್ 2020, 20:00 IST
Last Updated 5 ಜೂನ್ 2020, 20:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ತಮ್ಮೂರಿನ ಜನರ ಎದುರು ಶ್ರೀಮಂತನಂತೆ ಬಿಂಬಿಸಿಕೊಂಡು ಓಡಾಡಬೇಕೆಂದು ನಗರದ ಮನೆಗಳಲ್ಲಿ ಕಳವು ಮಾಡುತ್ತಿದ್ದ ಆರೋಪಿ ಮಂಜ ಅಲಿಯಾಸ್ ಪುಳಂಗ ಎಂಬಾತನನ್ನು ಕೋರಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಮಂಡ್ಯದ ಮಂಜ, ಹಲವು ವರ್ಷಗಳಿಂದ ಒಬ್ಬನೇ ಕೃತ್ಯ ಎಸಗುತ್ತಿದ್ದ. ಸದ್ಯ ಆತನಿಂದ ₹ 25 ಲಕ್ಷ ಮೌಲ್ಯದ ಚಿನ್ನಾಭರಣ, ಐದು ದ್ವಿಚಕ್ರ ವಾಹನ ಹಾಗೂ ಕಾರು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ತಮ್ಮೂರಿನಲ್ಲಿ ಶ್ರೀಮಂತನಂತೆ ಬಿಂಬಿಸಿಕೊಳ್ಳುತ್ತಿದ್ದ ಆರೋಪಿ, ಅದಕ್ಕೆ ತಕ್ಕಂತೆ ಶೋಕಿ ಮಾಡುತ್ತಿದ್ದ. ಕದ್ದ ಆಭರಣಗಳನ್ನು ಗಿರವಿ ಅಂಗಡಿಯಲ್ಲಿ ಅಡವಿಟ್ಟು ಅದೇ ಹಣದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ. ಕೆಲ ಯುವತಿಯರ ಜೊತೆಯೂ ಸಲುಗೆ ಇಟ್ಟುಕೊಂಡಿದ್ದ ಈತ, ಅವರಿಗೂ ಉಡುಗೊರೆಗಳನ್ನು ನೀಡುತ್ತಿದ್ದ’ ಎಂದೂ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.