ADVERTISEMENT

ಟೊಮೆಟೊ ತುಂಬಿಸಿಟ್ಟ ಟ್ರ್ಯಾಕ್ಟರ್‌ಗಳನ್ನು ಕದ್ದೊಯ್ಯುತ್ತಿದ್ದ ಕಳ್ಳರ ಬಂಧನ

ಹೊಸಕೋಟೆ ಪೊಲೀಸರ ಕಾರ್ಯಾಚರಣೆ ಕಾರ್ಯಾಚರಣೆ: ಶಿವಾನಂದ ಹಾಗೂ ಆನಂದ ಎನ್ನುವರ ಬಂಧನ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2023, 13:50 IST
Last Updated 1 ಆಗಸ್ಟ್ 2023, 13:50 IST
ಟೊಮೆಟೊ
ಟೊಮೆಟೊ   

ಹೊಸಕೋಟೆ: ಟೊಮೆಟೊ ಮತ್ತಿತರ ತರಕಾರಿಯನ್ನು ಮಾರುಕಟ್ಟೆಗೆ ಸಾಗಿಸುವ ಸಲುವಾಗಿ ತುಂಬಿಸಿಟ್ಟ ಟ್ರ್ಯಾಕ್ಟರ್‌ಗಳನ್ನು ರಾತ್ರಿ ಸಮಯ ಕದ್ದು ಪರಾರಿಯಾಗುತ್ತಿದ್ದ ಕಳ್ಳರನ್ನು ಹೊಸಕೋಟೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತರು ಕೋಲಾರ ಮೂಲದ ಶಿವಾನಂದ ಹಾಗೂ ಆನಂದ ಎಂದು ಗುರ್ತಿಸಲಾಗಿದೆ. ರೈತರನ್ನೇ ಟಾರ್ಗೆಟ್ ಮಾಡಿ ರಾತ್ರಿ ವೇಳೆ ತೋಟಗಳಲ್ಲಿ ತರಕಾರಿ ಸಮೇತ ನಿಲ್ಲಿಸುತ್ತಿದ್ದ ಟ್ರ್ಯಾಕ್ಟರ್‌ಗಳನ್ನು ಕಳವು ಮಾಡುತ್ತಿದ್ದರು. ಇಂತಹ ಘಟನೆಗಳು ಕೋಲಾರ, ಚಿಂತಾಮಣಿ, ಹೊಸಕೋಟೆ ಭಾಗದಲ್ಲಿ ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದು, ರೈತರ ನಿದ್ದೆ ಕೆಡಿಸಿತ್ತು.

ಹೊಸಕೋಟೆ ಸುತ್ತಮುತ್ತಲ ಪ್ರದೇಶಗಳಲ್ಲಿ ಕಷ್ಟಪಟ್ಟು ಬೆಳೆಸಿದ ಟೊಮೆಟೊ ಹಾಗೂ ತರಕಾರಿ ಬೆಳೆ ರಾತ್ರೋರಾತ್ರಿ ಮಾಯವಾಗುತ್ತಿತ್ತು. ಈ ಪ್ರಕರಣಗಳು ಹೊಸಕೋಟೆ ಪೊಲೀಸರಿಗೆ ತಲೆನೋವಾಗಿತ್ತು.

ADVERTISEMENT

ಬಂಧಿತರಿಂದ ಸುಮಾರು 12 ಟ್ರ್ಯಾಕ್ಟರ್‌ಗಳನ್ನು ವಶಪಡಿಸಿಕೊಂಡಿರುವ ಪೊಲೀಸರು, ಮಾಲೀಕರಿಗೆ ಒಪ್ಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.