ವಾಹನ ದಟ್ಟಣೆ
ಬೆಂಗಳೂರು: ಸರ್ಜಾಪುರ ಮುಖ್ಯರಸ್ತೆಯಲ್ಲಿ ವಾಹನ ದಟ್ಟಣೆ ನಿಯಂತ್ರಿಸುವ ಸಲುವಾಗಿ ಹಾಡೋಸಿದ್ದಾಪುರ ಜಂಕ್ಷನ್ ಬಳಿ ರಸ್ತೆ ವಿಭಜಕವನ್ನು ಪ್ರಿಕಾಸ್ಟ್ ಸೆಂಟರ್ ಮೀಡಿಯನ್ನಿಂದ ಮುಚ್ಚಲಾಗಿದೆ ಎಂದು ಸಂಚಾರ ವಿಭಾಗದ ಪೊಲೀಸರು ತಿಳಿಸಿದ್ದಾರೆ.
ಜಂಕ್ಷನ್ ಬಳಿ ಬಲ ತಿರುವು ಪಡೆದು ಹಾಡೋಸಿದ್ದಾಪುರ ಕಡೆಗೆ ಸಾಗುವ ವಾಹನಗಳು ಸರ್ಜಾಪುರ ರಸ್ತೆಯಲ್ಲಿ ಮುಂದುವರಿದು ಕಾರ್ಮೆಲರಾಂ ಜಂಕ್ಷನ್ ಬಳಿ ರೈಲ್ವೆ ಮೇಲ್ಸೇತುವೆ ಕೆಳಭಾಗದಲ್ಲಿ ‘ಯೂ’ ತಿರುವು ಪಡೆಯಬೇಕು.
ಹಾಡೋಸಿದ್ದಾಪುರ ಒಳಭಾಗದ ರಸ್ತೆಯಿಂದ ಜಂಕ್ಷನ್ ಬಳಿ ಸರ್ಜಾಪುರ ಕಡೆಗೆ ಬಲ ತಿರುವು ಪಡೆದು ಸಂಚರಿಸುತ್ತಿದ್ದ ವಾಹನಗಳು ಬದಲಿಗೆ ಜಂಕ್ಷನ್ ಬಳಿ ಎಡ ತಿರುವು ಪಡೆಯಬೇಕು ಎಂದು ದಕ್ಷಿಣ ವಿಭಾಗದ ಸಂಚಾರ ಪೊಲೀಸರು ಸಲಹೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.