ADVERTISEMENT

ಡಿವೈಎಸ್‌ಪಿ, ಪೊಲೀಸ್‌ ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2023, 15:04 IST
Last Updated 9 ಆಗಸ್ಟ್ 2023, 15:04 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ರಾಜ್ಯದ 3 ಡಿವೈಎಸ್‌ಪಿ ಹಾಗೂ 28 ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿ ಪೊಲೀಸ್ ಸಿಬ್ಬಂದಿ ಮಂಡಳಿ ಬುಧವಾರ ಆದೇಶ ಹೊರಡಿಸಿದೆ.

ವರ್ಗಾವಣೆಯಾದ ಡಿವೈಎಸ್‌ಪಿಗಳು

ಮಂಜುನಾಥ ಚೌಧರಿ: ಸಿಸಿಬಿ, ಬೆಂಗಳೂರು ನಗರ, ರಂಗಪ್ಪ ಟಿ: ಸಂಪಿಗೆಹಳ್ಳಿ ಉಪ ವಿಭಾಗ ಬೆಂಗಳೂರು, ರವಿ ಪಿ: ದೊಡ್ಡಬಳ್ಳಾಪುರ ಉಪ ವಿಭಾಗಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಿದೆ.

ADVERTISEMENT

ವರ್ಗಾವಣೆಯಾದ ಪೊಲೀಸ್‌ ಇನ್‌ಸ್ಪೆಕ್ಟರ್‌ಗಳು

ಪಿ.ಎಂ.ಹರೀಶ್‌ ಕುಮಾರ್‌, ಎಚ್‌ಎಸ್‌ಆರ್‌ ಲೇಔಟ್‌; ಸಲೀಂ ಸಿ. ನದಾಫ್‌, ಹೆಬ್ಬಾಳ ಸಂಚಾರ ಪೊಲೀಸ್‌ ಠಾಣೆ; ಎಸ್‌.ಪ್ರಶಾಂತ್‌, ಹಲಸೂರು ಸಂಚಾರ ಪೊಲೀಸ್‌ ಠಾಣೆ; ಎ.ಡಿ.ಪ್ರೀತಂ, ಬೊಮ್ಮನಹಳ್ಳಿ; ಎಂ.ಎಸ್‌.ರವಿ, ಜ್ಞಾನಭಾರತಿ; ಐ.ರಹೀಂ, ಕೆ.ಜಿ.ಹಳ್ಳಿ; ಬಿ.ಚಿದಾನಂದ, ಯಶವಂತಪುರ ಸಂಚಾರ ಪೊಲೀಸ್ ಠಾಣೆ; ಎ.ಕೆ.ರಕ್ಷಿತ್‌, ಕೆಂಪೇಗೌಡ ನಗರ; ಎಚ್‌.ಸಂದೀಪ್‌, ಸಿಟಿ ಮಾರುಕಟ್ಟೆ; ಜಿ.ಪಿ.ರಾಜು, ಮಾಗಡಿ ರಸ್ತೆ; ಎಂ.ಎಸ್.ಅನಿಲ್‌ಕುಮಾರ್‌, ಪೀಣ್ಯ; ಎಸ್‌.ಶ್ರೀಧರ್‌, ಕೆ.ಜಿ.ಹಳ್ಳಿ ಸಂಚಾರ ಪೊಲೀಸ್‌ ಠಾಣೆ; ಹನುಮಂತ ಕೆ. ಭಜಂತ್ರಿ, ಹಲಸೂರು ಗೇಟ್‌;ಎಸ್‌.ಲಕ್ಷ್ಮಣಗೌಡ, ರಾಜಾಜಿನಗರ; ಸಿ.ಜೆ.ಚೈತನ್ಯ, ಕೆ.ಆರ್.ಪುರ ಸಂಚಾರ ಪೊಲೀಸ್‌ ಠಾಣೆ; ಬಿ.ಎಸ್‌.ಮಂಜುನಾಥ್‌, ಜಿಗಣಿ; ಎಂ.ಎಲ್‌.ಕೃಷ್ಣಮೂರ್ತಿ, ಯಲಹಂಕ; ಟಿ.ಎಲ್‌.ಪ್ರವೀಣ್‌ ಕುಮಾರ್‌, ಸಿಇಎನ್‌, ಬೆಂಗಳೂರು ಜಿಲ್ಲೆ; ಬಿ.ಎನ್‌.ಪುನೀತ್‌, ಕಾಮಾಕ್ಷಿಪಾಳ್ಯ; ಕೆ.ಬಿ.ರವಿ, ಅಶೋಕನಗರ; ಬಿ.ಎಂ.ಶಿವಕುಮಾರ್, ರಾಜರಾಜೇಶ್ವರಿ ನಗರ; ಟಿ.ಶ್ರೀನಿವಾಸ್‌, ವಿಶ್ವನಾಥಪುರ, ಬೆಂಗಳೂರು ಜಿಲ್ಲೆ; ಬಿ.ಆರ್.ರಾಘವೇಂದ್ರ, ಜಯನಗರ; ಎಂ.ಕೆ.ಮುರಳೀಧರ್, ಮಾದನಾಯಕನಹಳ್ಳಿ; ಹೇಮಂತ್‌ಕುಮಾರ್‌, ವಿಜಯನಗರ; ಕೆಂಪೇಗೌಡ, ಜೆಜೆ ನಗರಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ರದ್ದುಪಡಿಸಲಾದ ವರ್ಗಾವಣೆ

ಕಳೆದ ವಾರ ವರ್ಗಾವಣೆ ಮಾಡಿದ್ದ ಮೂವರು ಡಿವೈಎಸ್‌ಪಿಗಳಾದ ಮೊಹಮ್ಮದ್‌ ಹಶ್ಮತ್ ಖಾನ್‌. ಐ, ಪ್ರಶಾಂತ್ ಜಿ ಮುನೋಳ್ಳಿ, ಮುರುಗೇಂದ್ರ ಎಮ್‌. ಅವರ ವರ್ಗಾವಣೆಯನ್ನು ರದ್ದುಗೊಳಿಸಿದೆ. ಅಲ್ಲದೇ 12 ಮಂದಿ ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ ಆದೇಶವನ್ನೂ ರದ್ದುಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.