ADVERTISEMENT

ಎರಡು ಬಾರಿ ಜೈಲು ಶಿಕ್ಷೆ: ಮತ್ತೆ ಕೊಲೆಗೈದ ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2021, 20:53 IST
Last Updated 17 ಫೆಬ್ರುವರಿ 2021, 20:53 IST

ಬೆಂಗಳೂರು: ಕೊಲೆ ಪ್ರಕರಣಗಳಲ್ಲಿ ಎರಡು ಬಾರಿ ಜೈಲು ಶಿಕ್ಷೆ ಅನುಭವಿಸಿ, ಮತ್ತೆ ವ್ಯಕ್ತಿಯೊಬ್ಬರನ್ನು ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದ ಆರೋಪಿಯನ್ನುತಲಘಟ್ಟಪುರ ಪೊಲೀಸರು ಬಂಧಿಸಿದ್ದಾರೆ.

ಆರ್ಮುಗಂ (48) ಬಂಧಿತ ಆರೋಪಿ. ಬನಶಂಕರಿ 6ನೇ ಹಂತದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡವೊಂದರಲ್ಲಿ ಈತ ಕಾವಲುಗಾರನಾಗಿ ಕೆಲಸಕ್ಕೆ ಸೇರಿದ್ದ.

ಅದೇ ಕಟ್ಟಡದಲ್ಲಿ ಕೆಲಸಕ್ಕೆಂದು ಆರೋಪಿಯೇ ಕರೆತಂದಿದ್ದ ಧಾರವಾಡ ಮೂಲದ ಮೆಹಬೂಬ್‌ ಸಾಬ್ (45) ಎಂಬುವರ ಜೊತೆಗೆ ಹಣದ ವಿಚಾರಕ್ಕಾಗಿ ಜ.28ರ ರಾತ್ರಿ ಜಗಳವಾಗಿತ್ತು. ಈ ವೇಳೆ ಮೆಹಬೂಬ್‌ ತಲೆಗೆಇಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದ. ಕೃತ್ಯದ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದು, ಈ ಸಂಬಂಧತಲಘಟ್ಟಪುರ ಠಾಣೆಯಲ್ಲಿ ದೂರು ದಾಖಲಾಗಿತ್ತು.

ADVERTISEMENT

ಎರಡು ಬಾರಿ ಜೈಲು ಶಿಕ್ಷೆ: ‘ಆರೋಪಿ ತಮಿಳುನಾಡಿನ ತಿರುವಣ್ಣಾಮಲೈಯವನಾಗಿದ್ದು, ಅಲೆಮಾರಿಯಾಗಿ ಜೀವನ ನಡೆಸುತ್ತಿದ್ದ. 1998ರಲ್ಲಿ ಮೈಸೂರಿನ ದೇವರಾಜ ನಗರಠಾಣಾ ವ್ಯಾಪ್ತಿಯಲ್ಲಿ ತನ್ನ ಅಣ್ಣನ ಹೆಂಡತಿಯನ್ನು ಕೊಲೆ ಮಾಡಿ ಜೈಲು ಸೇರಿದ್ದ. ಹೊರಬಂದ ನಂತರ2004ರಲ್ಲಿ ಬೆಂಗಳೂರಿನ ಹೆಬ್ಬಾಳ ಠಾಣಾ ವ್ಯಾಪ್ತಿಯಲ್ಲಿ ತನ್ನ ಹೆಂಡತಿಯ ತಲೆಗೆ ಕಲ್ಲಿನಿಂದ ಹೊಡೆದು, ಕೊಲೆ ಮಾಡಿದ್ದ. ಈ ಪ್ರಕರಣದಲ್ಲಿ 14 ವರ್ಷಗಳ ಜೈಲುಶಿಕ್ಷೆಗೂ ಗುರಿಯಾಗಿದ್ದ. ಐದು ವರ್ಷಗಳ ಹಿಂದೆ ಜೈಲಿನಿಂದ ಬಿಡುಗಡೆಗೊಂಡ ನಂತರ, ಗಾರೆ ಕೆಲಸ ಮಾಡಿಕೊಂಡಿದ್ದ’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.